Advertisement
ಸರಣಿ ಪ್ರಕಾರ ಸಚಿವರು ಸಿಂಧನೂರಿಗೆ ಬಂದು ಹೋದಾಗಲೂ ಇತ್ಯರ್ಥವಾಗದ ಅಸಮಾಧಾನಗಳಿಗೆ ರಾಜ್ಯಾಧ್ಯಕ್ಷರ ಮೂಲಕವೇ ತೆರೆ ಬಿದ್ದಿದೆ. ಎಲ್ಲರನ್ನೂ ಒಗ್ಗೂಡಿಸಿ ಅವರಿಗೆ ಪಕ್ಷದ ಶಿಸ್ತಿನ ಪಾಠ ಹೇಳಿರುವ ರಾಜ್ಯಾಧ್ಯಕ್ಷರು, ಎಲ್ಲರೂ ಒಂದೇ ದೋಣಿಯಲ್ಲಿ ಸಾಗುವಂತೆ ತಿಳಿಸಿದ ಬೆನ್ನಲ್ಲೇ “ಹಸ್ತಲಾಘವ’ ಮಾಡಿಸಲಾಗಿದೆ. ಜತೆಗೆ, ಸಾಮೂಹಿಕ ಜವಾಬ್ದಾರಿಯ ಮಂತ್ರ ಪಠಿಸಿ ಗ್ರಾಪಂ ಚುನಾವಣೆಯ ಟಾಸ್ಕ್ ವಹಿಸಲಾಗಿದೆ.
Related Articles
Advertisement
ಹೊಸ ಟಾಸ್ಕ್: ಗ್ರಾಮ ಸ್ವರಾಜ್ ಕಾರ್ಯಕ್ರಮದ ಮೂಲಕ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಬೇಕು ಎಂಬ ನಿರ್ಧಾರ ಈಗಾಗಲೇ ಬಿಜೆಪಿ ಪ್ರಕಟಿಸಿದೆ. ಅದಕ್ಕೆ ಪೂರಕವಾಗಿ ಶ್ರಮಿಸುವಂತೆ ಸಿಂಧನೂರಿನಲ್ಲೂ ಜವಾಬ್ದಾರಿ ಹಂಚಲಾಗಿದೆ. ತಾಲೂಕಿನ 30 ಗ್ರಾಪಂ ವ್ಯಾಪ್ತಿಯ 626 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕೆಂದು ಸ್ಥಳೀಯ ಮುಖಂಡರಿಗೆ ಟಾಸ್ಕ್ ನೀಡಲಾಗಿದೆ.
ಎರಡು ಗುಂಪಿನವರಿಗೆ 5 ರಿಂದ 10 ನಿಮಿಷದ ಕಾಲ ಅವರ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಿದ ರಾಜ್ಯಾಧ್ಯಕ್ಷರು, ಬಳಿಕ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಸಾಗಬೇಕಿರುವ ಮಾರ್ಗ ಸೂಚಿಸಿದ್ದಾರೆ. ಅದಕ್ಕೆ ತಾಲೂಕಿನ ಎಲ್ಲ ಮುಖಂಡರು ಅಸ್ತು ಎಂದ ಹಿನ್ನೆಲೆಯಲ್ಲಿ ಅಪಸ್ವರಗಳಿಗೆ ತೆರೆಬಿದ್ದಿದೆ. ಮಂಡಲ ಅಧ್ಯಕ್ಷರ ನೇಮಕ, ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶನ ಸೇರಿದಂತೆ ಎಲ್ಲ ಹಂತದಲ್ಲಿ ಎರಡು ಗುಂಪಿನ ಪೈಪೋಟಿಯೇ ಕಂಡುಬಂದರೂ ಪರಿಸ್ಥಿತಿ ಸುಧಾರಿಸಿಲಿಲ್ಲ.
ಗ್ರಾಪಂ ಚುನಾವಣೆ ಮತ್ತು ಇತ್ತೀಚೆಗೆ ರಾಜ್ಯ ಪದಾಧಿ ಕಾರಿಗಳ ಸಭೆ ತಾಲೂಕಿನ ಬಿಜೆಪಿಗೆ ಮದ್ದು ಅರಿದಂತಾಗಿದ್ದು, ಪಕ್ಷದ ವಲಯದಲ್ಲೂ ಇದೀಗ ಹೊಸ ಉತ್ಸಾಹ ಕಾಣಿಸಿದೆ. ಪಕ್ಷದ ಕಚೇರಿಯೇ ಮುಖ ಬಿಜೆಪಿ ತಾಲೂಕು ಕಚೇರಿಯ ಖರ್ಚು-ವೆಚ್ಚ ಒಂದೇ ಕಡೆಯವರು ನೋಡಿಕೊಳ್ಳುತ್ತಾರೆಂಬ ಹಿನ್ನೆಲೆಯಲ್ಲಿ ಹೇಳಿದಾಗ ಅದನ್ನು ಎಲ್ಲರೂ ಹಂಚಿಕೊಳ್ಳುವಂತೆಯೂ ತಿಳಿಸಲಾಗಿದೆ. ಪಕ್ಷದ ಕಚೇರಿಗೆ ಎಲ್ಲ ಮುಖಂಡರು ಭೇಟಿ ನೀಡಬೇಕು. ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಬೇಕು. ಪಕ್ಷದ ಕೆಲಸಗಳಿಗೆ ತಾಲೂಕು ಅಧ್ಯಕ್ಷರ ಲೆಟರ್ ಪ್ಯಾಡ್ಗಳನ್ನು ಅ ಧಿಕೃತವಾಗಿ ಬಳಸಬೇಕು. ಆ ಮೂಲಕವೇ ಸಂದೇಶಗಳು ರವಾನೆಯಾಗಬೇಕೆಂದು ರಾಜ್ಯಾಧ್ಯಕ್ಷರು ಸೂಚಿಸಿದ್ದಾರೆಂದು ಗೊತ್ತಾಗಿದೆ. ರಾಜ್ಯಾಧ್ಯಕ್ಷರೊಂದಿಗೆ ಮಾತುಕತೆ ನಂತರ ಎಲ್ಲರೂ ಒಗ್ಗಟ್ಟಾಗಿ ತಾಲೂಕು ಕಚೇರಿಯಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿಂದಲೇ ಮುಂದಿನ ಚುನಾವಣೆ ಚಟುವಟಿಕೆಗಳಿಗೂ ಚಾಲನೆ ನೀಡಿದ್ದಾರೆ.
ಯಮನಪ್ಪ ಪವಾರ