Advertisement

ವಿಶ್ವ ಹಿಂದೂ ಪರಿಷತ್ತಿನವರದ್ದು ಗೂಂಡಾ ಸಂಸ್ಕೃತಿಯಲ್ಲ : ಕಟೀಲ್

04:54 PM Feb 18, 2021 | Team Udayavani |

ಹಾಸನ: ಅಧಿಕಾರಕ್ಕಾಗಿ ಪಂಕ್ಷಾಂತರ ಮಾಡಿದವರು,  ಅಧಿಕಾರಕ್ಕಾಗಿ ಅಹಿಂದಾ, ಅಧಿಕಾರದ ಬಳಿಕ ಸಹಿಂದಾ ಎನ್ನುತ್ತೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

Advertisement

ಹಾಸನದಲ್ಲಿ ರಾಜ್ಯ ಪ್ರಕೋಷ್ಟಗಳ ಸಭೆಯನ್ನುದ್ದೇಶಿಸಿ ಮಾತನನಾಡುತ್ತಾ, ಅವರು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?

ಇನ್ನು, ರಾಮ ಮಂದಿರದ ದೇಣಿಗೆ ಸಂಗ್ರಹದ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರನ್ನು ಕೂಡ ಕಟೀಲ್ ತರಾಟೆಗೆ ತೆಗೆದುಕೊಂಡರು.

“ಇನ್ನೊಬ್ಬರು ಹಾಸನದವರು, ದಿನವಿಡಿ ನಿಂಬೆ ಹಣ್ಣು ಹಿಡಿದುಕೊಂಡು ಓಡಾಡುವವರು.  ಜ್ಯೋತಿಷ್ಯವನ್ನೇ ನಂಬಿಕೊಂಡಿರುವವರು.  ಜ್ಯೋತಿಷಿ ಹೇಳದೇ ಹೋದರೆ ವಿಧಾನಸೌಧಕ್ಕೂ ಬರುವುದಿಲ್ಲ. ಅಂಥವರು ರಾಮಮಂದಿರ ನಿರ್ಮಾಣದ ಹಣಸಂಗ್ರಹದ ಬಗ್ಗೆ ಮಾತಾನಾಡುತ್ತಾರೆ. ನಮಗೆ ಸಂಶಯವಿದೆ ಮುಖ್ಯಮಂತ್ರಿಯಾಗಿದ್ದಾಗ ಯಾರಲ್ಲಿಯೋ ಹಣ ತೆಗೆದುಕೊಂಡಿದ್ದಾರಾ..? ಯಾರಿಗೋ ಕೆಲಸ ಮಾಡಿ ಕೊಡುತ್ತೇನೆಂದು ದುಡ್ಡು ತೆಗೆದುಕೊಂಡಿದ್ದೀರಾ.? ಅವರ ಕೆಲಸ ಮಾಡಿಕೊಟ್ಟಿಲ್ವ..? ಹಾಗಾಗಿಯೇ‌ ನಿಮ್ಮಲ್ಲಿ ಬಂದು ಹಣ ಕೇಳಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿಯವರನ್ನು ವ್ಯಂಗ್ಯ ಮಾಡಿದರು.

Advertisement

ಇನ್ನು, ವಿಶ್ವಹಿಂದೂ ಪರಿಷತ್ತಿನವರದ್ದು ಗೂಂಡಾ ಸಂಸ್ಕೃತಿಯಲ್ಲ. ರಾಮನ ಭಕ್ತರು ಎಂಬ ಒಂದೇ ಕಾರಣಕ್ಕೆ ನಿಮ್ಮ ಬಳಿ ಬಂದಿರಬಹುದು. ಅದಕ್ಕೆ ಬೆದರಿಕೆವೊಡ್ಡಿದರೆಂಬ ಆರೋಪ ಸರಿಯಲ್ಲ ಎಂದ ನಳೀನ್ ಕುಮಾರ್ ಕಟೀಲ್ ಹೇಳಿದರು.

ಓದಿ :  ಲೈಂಗಿಕ ಕಿರುಕುಳ ಆರೋಪದಿಂದ ಗೊಗೊಯ್ ದೋಷಮುಕ್ತ : ಸುಪ್ರೀಂ

Advertisement

Udayavani is now on Telegram. Click here to join our channel and stay updated with the latest news.

Next