Advertisement

ಕಟಪಾಡಿ : ಕೊನೆಗೂ ತಂಪೆರೆದ ಮಳೆರಾಯ

08:14 PM Jun 10, 2019 | Team Udayavani |

ಕಟಪಾಡಿ: ಉದ್ಯಾವರ, ಕಟಪಾಡಿ, ಮಟ್ಟು, ಕುರ್ಕಾಲು, ಪಾಂಗಾಳ ಸಹಿತ ಇತರ ಭಾಗಗಳಲ್ಲಿ ಸೋಮವಾರ ಮಧ್ಯಾಹ್ನ ವೇಳೆಗೆ ಸಾಧಾರಣ ಮಳೆ ಸುರಿದಿದೆ.

Advertisement

ಇದರಿಂದ ಪರಿಸರ ತುಸು ತಂಪಾಗಿದೆ. ರಾಜ್ಯ ಸರಕಾರವು ಸರಕಾರಿ ರಜೆ ಘೋಷಿಸಿದ್ದರಿಂದ ಶಾಲಾ ಮಕ್ಕಳು ಮಳೆಯ ವಾತಾವರಣದಲ್ಲಿ ಮನೆಗೆ ಹಿಂತಿರುಗುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತ್ತು.

ಕೆಲ ಮಂದಿ ಅಂಗಡಿ ಮುಂಗಟ್ಟುಗಳಲ್ಲಿ ಮಳೆ ವೇಳೆ ಆಶ್ರಯ ಪಡೆದರು. ಶುರುವಿನ ಮಳೆಯಾದ್ದರಿಂದ ರಸ್ತೆಗಳಲ್ಲಿ ಜಿಡ್ಡಿನ ಅಂಶ ಇದ್ದು ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next