Advertisement

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

10:05 PM Sep 24, 2023 | Team Udayavani |

ಕಾಪು : ಕಟಪಾಡಿ ಮೂಡಬೆಟ್ಟು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಮನೀಶ್‌ ಎಂಬಾತನನ್ನು ಕಾಪು ಎಸ್ಐ ಅಬ್ದುಲ್‌ ಖಾದರ್‌ ನೇತೃತ್ವದ ಪೊಲೀಸ್‌ ತಂಡವು ಬಂಧಿಸಿದೆ.

Advertisement

ಕಟಪಾಡಿ ಸರ್ವಿಸ್‌ ರಸ್ತೆ ಬದಿಯಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಹಲವು ಜನರ ಗುಂಪು ಸೇರಿದ್ದು ಅವರುಗಳ ಮಧ್ಯದಲ್ಲಿ ಬೂದು ಬಣ್ಣದ ಟಿ-ಶರ್ಟ್‌ ಹಾಗೂ ತಿಳಿ ಬೂದು ಬಣ್ಣದ ಬರ್ಮುಡಾವನ್ನು ಧರಿಸಿದ ವ್ಯಕ್ತಿಯು ಕೈಯಲ್ಲಿ ಚೀಟಿ ಬರೆಯುತ್ತಾ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಜೋರಾಗಿ ಹೇಳುತ್ತಿದ್ದು ಸಾರ್ವಜನಿಕರು ಹಣವನ್ನು ನಂಬ್ರಗಳ ಮೇಲೆ ಪಣವಾಗಿ ಕಟ್ಟುತ್ತಿರುವುದು ಬೆಳಕಿಗೆ ಬಂದಿತ್ತು.

ಈ ಸ್ಥಳಕ್ಕೆ ಕಾಪು ಎಸ್ಐ ಅಬ್ದುಲ್‌ ಖಾದರ್‌ ಅವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದು ಈ ವೇಳೆ ಅಲ್ಲಿ ಹಣ ಕಟ್ಟಲು ಸೇರಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಟ್ಕಾ ಚೀಟಿ ಬರೆಯುತ್ತಿದ್ದ ಮನೀಶ್‌ ಎಂಬಾತನನ್ನು ವಶಕ್ಕೆ ತೆಗೆದುಕೊಂಡು, ಆತನಿಂದ 1020 ರೂಪಾಯಿ ವಶಪಡಿಕೊಂಡಿದ್ದಾರೆ.

ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next