Advertisement

ಕಟಪಾಡಿ: ಮಟ್ಟುಗುಳ್ಳ ಬೆಳೆಗೆ ಮುಸುಕಿದ ಮೋಡದ ಕರಿಛಾಯೆ

05:46 PM Jan 11, 2024 | Team Udayavani |

ಕಟಪಾಡಿ: ಅಕಾಲಿಕವಾಗಿ ಸುರಿದ ಮಳೆ, ಮೋಡದ ಕವಿದ ವಾತಾವರಣ ಸಹಿತ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾನಿಗೊಂಡು ಪ್ರಸಕ್ತ ಸಾಲಿನ ಪ್ರಥಮ ಮಟ್ಟುಗುಳ್ಳ ಬೆಳೆಗೆ ಬರೆಯನ್ನು ಎಳೆದಿದ್ದು, ಮಟ್ಟುಗುಳ್ಳ ಬೆಳೆಗಾರರ ಮೇಲೆ ಮುಸುಕಿ ಮೋಡದ ಕರಿಛಾಯೆಯಿಂದ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.

Advertisement

ಕಳೆದ 2-3 ದಿನಗಳಿಂದ ಸುರಿದ ಅಕಾಲಿಕ ಮಳೆ, ಮೋಡ ಕವಿದ ವಾತಾವರಣ, ಉರಿ ಬಿಸಿಲ ಪರಿಣಾಮ ಜನಜನಿತವಾಗಿರುವ ಮಟ್ಟುಗುಳ್ಳದ ಬೆಳೆ ಹಾನಿಗೊಂಡು ಬೆಳೆಗಾರರು ನಷ್ಟವನ್ನು ಅನುಭವಿಸುವಂತಾಗಿದೆ. ಮಟ್ಟುಗುಳ್ಳದ ಗದ್ದೆಯಲ್ಲಿ ನೀರು ನಿಂತಿದೆ. ಹಾಗಾಗಿ ಮಟ್ಟುಗುಳ್ಳ ಗಿಡದ ಬೇರು ಕೊಳೆಯಲಾರಂಭಿಸಿದೆ. ಬಿಟ್ಟಿರುವ ಹೂವು ಉದುರಲು ಶುರುವಿಟ್ಟಿದೆ. ಬೆಳೆಯುತ್ತಿರುವ ಮಿಡಿ ಮಟ್ಟುಗುಳ್ಳ ನೆಲ ಕಚ್ಚುತ್ತಿದೆ. ಹಾಗಾಗಿ ಬೆಳೆಗಾರರು ಸಂಕಷ್ಟವನ್ನು ಎದುರಿಸುವಂತಾಗಿದೆ.

ಒಂದೆಡೆ ಮಳೆ, ಮೋಡ ಕವಿದ ವಾತಾವರಣ, ಹಗಲಿನ ಉರಿ ಬಿಸಿಲಿನ ದುಷ್ಪರಿಣಾಮದಿಂದ ಮಟ್ಟುಗುಳ್ಳದ ಗಿಡವು ಹಾನಿಗೀಡಾಗುತ್ತಿದ್ದು, ಫಸಲಿನ ಇಳುವರಿ ಕುಂಠಿತಗೊಂಡಿರುತ್ತದೆ. ಇದೀಗ ಮಟ್ಟುಗುಳ್ಳದ ಬೇಡಿಕೆಯ ಕಾಲವಾಗಿದ್ದು, ಸೂಕ್ತ ಪ್ರಮಾಣದ ಫಸಲು ಮಟ್ಟುಗುಳ್ಳ ಬೆಳೆಗಾರರ ಕೈಗೆ ಲಭಿಸದೆ ಬೆಳೆಯ ನಷ್ಟದೊಂದಿಗೆ ಆರ್ಥಿಕ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ಬೆಳೆಗಾರರು ಪರಿತಪಿಸುತ್ತಿದ್ದಾರೆ.

ಮೂರು ತಿಂಗಳು ಬಲಿತ ಮಟ್ಟುಗುಳ್ಳದ ಸಸಿಯು ಫಸಲಿನ ಸಹಿತ ನೆಲಕಚ್ಚುತ್ತಿದ್ದು, ಬೆಳೆಗಾರರ ಬೆಳೆಯ ಮೇಲೆ ಬರೆ ಎಳೆದಂತಾಗಿದೆ. ಬಂಡವಾಳ ಹಾಕಿ ಬೆಳೆಸಿದ ಬೆಳೆಯು ಉತ್ತಮ ಫಸಲು ಕೈ ಸೇರುವ ಸಮಯದಲ್ಲಿಯೇ ಅಕಾಲಿಕ ಮಳೆ-ಮೋಡದ ಕರಿಛಾಯೆಯು ಮಟ್ಟುಗುಳ್ಳ ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ. ಮರು ನಾಟಿ ಮಾಡಿ ಮಟ್ಟುಗುಳ್ಳ ಬೆಳೆಯ ಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ತಮ್ಮ ಮನದ ದುಗುಡವನ್ನು ವ್ಯಕ್ತ ಪಡಿಸಿದ್ದಾರೆ.

ಒಂದೆಡೆ ಇದುವರೆಗೆ ಬಳಸಿದ ಗೊಬ್ಬರ, ಸಿದ್ಧ ಪಡಿಸಿದ ಗದ್ದೆ, ಮಲ್ಚಿಂಗ್‌ ಶೀಟ್‌, ಸಹಿತ ಬೆಳೆಯು ನೆಲ ಕಚ್ಚಿದ್ದು, ಅಪಾರ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ತಿಳಿಸುವ ಮಟ್ಟುಗುಳ್ಳ ಬೆಳೆಗಾರರು ತೋಟಗಾರಿಕೆ ಇಲಾಖೆಯಿಂದ ಸೂಕ್ತ ಪರಿಹಾರವನ್ನು ಎದುರು ನೋಡುತ್ತಿದ್ದಾರೆ.

Advertisement

ಜಿಐ ಮಾನ್ಯತೆಯೊಂದಿಗೆ ಪೇಟೆಂಟ್‌ ಪಡೆದು ಲಾಂಛನ (ಸ್ಟಿಕ್ಕರ್‌)ದೊಂದಿಗೆ ಮುಂಬಯಿ, ಬೆಂಗಳೂರು ಸೇರಿದಂತೆ ದೇಶ ವಿದೇಶಗಲ್ಲಿ ಮಟ್ಟುಗುಳ್ಳ ಪ್ರಿಯರಿದ್ದು, ಅಲ್ಲಿಗೂ ಕಾಲಕಾಲಕ್ಕೆ ಸರಬರಾಜು ಮಾಡಲಾಗುತ್ತಿರುವ ಮಟ್ಟುಗುಳ್ಳ ಬೆಳೆಯು ಕೈ ಕೊಟ್ಟಿದ್ದು, ಬಂಡವಾಳ ಹಾಕಿದ ಬೆಳೆಗಾರರು ಆರ್ಥಿಕ ನಷ್ಟದಿಂದ ಕಂಗಾಲಾಗಿದ್ದಾರೆ.

ಫ‌ಸಲಿಗೆ ಹಾನಿ,ಬೆಲೆ ಏರಿಕೆ
ಶುಭ ಕಾರ್ಯಗಳ ನಿಮಿತ್ತ ಬಹು ಬೇಡಿಕೆಯುಳ್ಳ  ಜನಪ್ರಿಯ ಮಟ್ಟುಗುಳ್ಳವು ಅಕಾಲಿಕಮಳೆಯಿಂದ ಬಾಧಿತವಾಗಿದೆ. ಮಟ್ಟುಗುಳ್ಳದ ಫಸಲು ಉದುರಲು ಆರಂಭಿಸಿದ್ದು,ಬೇಡಿಕೆಯಷ್ಟು ಮಟ್ಟುಗುಳ್ಳವನ್ನು ಮಾರುಕಟ್ಟೆಗೆಪೂರೈಸಲು ಸಾಧ್ಯವಾಗುತ್ತಿಲ್ಲ.

ಇಳುವರಿ ಕುಂಠಿತ, ಬೇಡಿಕೆ ಹೆಚ್ಚಳದಿಂದ ಸ್ವಾಭಾವಿಕವಾಗಿಬೆಲೆಯಲ್ಲೂಏರಿಕೆಯಾಗಿದ್ದು ಮಾರುಕಟ್ಟೆಯಲ್ಲಿ ಕೆಜಿಗೆ ಸುಮಾರು120-130 ರೂ.ಗೆ ಮಾರಾಟವಾಗುತ್ತಿದೆ. ಮಟ್ಟು ಪ್ರದೇಶದಿಂದ ಕೈಪುಂಜಾಲು ವರೆಗಿನ ಸುಮಾರು 80ಎಕರೆಗೂ ಅಧಿಕ ಪ್ರದೇಶದ ಪ್ರಸಕ್ತ ಸಾಲಿನ ಪ್ರಥಮ ಇಳುವರಿ (ಕೊಯ್ಲು) ಮೂರು ವಾರಗಳ ಫಸಲು ಪ್ರಕೃತಿ ವೈಪರೀತ್ಯಕ್ಕೆ ಬಲಿಯಾಗಿದೆ.
-ಲಕ್ಷ್ಮಣ್‌ ಮಟ್ಟು, ಮ್ಯಾನೇಜರ್‌, ಮಟ್ಟುಗುಳ್ಳ
ಬೆಳೆಗಾರರ ಸಂಘ,ಮಟ್ಟು

ಸೂಕ್ತಪರಿಹಾರ
ಈಬಗ್ಗೆ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಲಾಗುವುದು. ಪ್ರಕೃತಿ ವಿಕೋಪನಿಧಿಯಡಿ ಸೂಕ್ತಪರಿಹಾರವನ್ನು ಒದಗಿಸುವಲ್ಲಿ ಕ್ರಮ ವಹಿಸಲಾಗುವುದು.
– ಎಲ್‌. ಹೇಮಂತ್‌ ಕುಮಾರ್‌,ಹಿರಿಯ
ಸಹಾಯಕನಿರ್ದೇಶಕರು, ತೊಟಗಾರಿಕಾಇಲಾಖೆ

*ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next