Advertisement

ಕಾಸಿನಸರ ಚಿತ್ರ ವಿಮರ್ಶೆ; ರೈತರ ಬದುಕಿನೊಳಗೊಂದು ನೋಟ

11:17 AM Mar 05, 2023 | Team Udayavani |

ಕೃಷಿ ನಮ್ಮ ದೇಶದ ಮೂಲ ಕಾಯಕ. ಭೂಮಿ ತಾಯಿಯನ್ನು ಪೋಷಿಸುತ್ತಾ, ನೈಸರ್ಗಿಕವಾಗಿ ಬೆಳೆ ಬೆಳೆದು ನೆಮ್ಮದಿ ಜೀವನ ಸಾಗಿಸುವ ಕಾಲ ಇಂದು ಕಾಣೆಯಾಗಿದೆ. ಭೂಮಿಯನ್ನು ಹಾಳು ಮಾಡುವುದರ ಜೊತೆಗೆ ರೈತನ ಬದುಕಿಗೂ ಮುಳ್ಳಾಗಿದೆ ಪ್ರಸ್ತುತ ರಾಸಾಯನಿಕ ಪದ್ದತಿ. ಇಂದಿನ ರಾಸಾಯನಿಕ ಯುಕ್ತ ಬೆಳೆ, ಸಾಲದ ಹೊರೆ, ದಲ್ಲಾಳಿಗಳ ಕಾಟ, ವಿದೇಶಿ ಕಂಪನಿಗಳ ಅಕ್ರಮ ಇವುಗಳಲ್ಲೇ ರೈತರ ಬದುಕು ಮತ್ತಷ್ಟು ಬಡವಾಗಿದೆ. ರೈತರ ಈ ಅಳಲನ್ನು ಹಾಗೂ ಸಾವಯವ ಕೃಷಿ ಪದ್ಧತಿಯನ್ನು ಬೆಂಬಲಿಸುವ ಅಪ್ಪಟ ಮಣ್ಣಿನ ಕೃಷಿ ಆಧಾರಿತ ಚಿತ್ರ ಈ ವಾರ ತೆರೆಕಂಡಿರುವ ಕಾಸಿನಸರ.

Advertisement

ಕಥಾ ನಾಯಕ ಸುಂದರೇಶ್‌ ಹಾಗೂ ನಾಯಕಿ ಸಂಪಿಗೆ ಕೃಷಿಯಲ್ಲಿ ಪದವೀಧರರು. ತಮ್ಮ ಪೂರ್ವಿಕರು ಅನುಸರಿಸಿದ ಸಾವಯವ ಕೃಷಿ ಪದ್ಧತಿಯಂತೆ ವ್ಯವಸಾಯ ಮಾಡಬೇಕು ಎಂದು ದುಡಿ ಯುವ ನಾಯಕ. ಲಾಭದ ಆಸೆಗೆ ರಾಸಾಯನಿಕ ಕೃಷಿ ಪದ್ಧತಿ ಬಳಸಿ, ದುಡ್ಡಿನ ಆಸೆಗೆ ತಮ್ಮ ಜಮೀನನ್ನೇ ಮಾರಲು ಹೊರಟ ಊರಿನ ರೈತರು. ಇಷ್ಟೆಲ್ಲಾ ಸವಾಲುಗಳನ್ನು ದಾಟಿ ಯುವ ರೈತ ಹೇಗೆ ಸಾವಯವ ಕೃಷಿ ಪದ್ಧತಿ ಉಳಿಸಿ ಕೊಂಡು, ಇತರ ರೈತರಿಗೂ ಮಾದರಿಯಾಗುತ್ತಾನೆ ಎಂಬುದು “ಕಾಸಿನಸರ’ದ ಆಶಯ.

ನಿರ್ದೇಶಕ ಎನ್‌ ಆರ್‌ ನಂಜುಡೇಗೌಡ ಒಂದು ಸಾಮಾಜಿಕ ಕಳಕಳಿ ಹಾಗೂ ರೈತ ಸಮುದಾಯಕ್ಕೆ ಉತ್ತಮ ಸಂದೇಶ ಸಾರುವ ಕೆಲಸ ಮಾಡಿದ್ದಾರೆ. ಕಥೆಗೆ ಪೂರಕವಾದ ಪರಿಸರ ಈ ಸಿನಿಮಾದ ಪ್ಲಸ್‌ ಪಾಯಿಂಟ್‌. ಯುವ ರೈತನಾಗಿ ವಿಜಯ್‌ ರಾಘವೇಂದ್ರ ಮಿಂಚಿದ್ದು, ಹರ್ಷಿಕಾ ಪೂಣಚ್ಚ ಪಾತ್ರಕ್ಕೆ ಹೊಂದಿಕೊಂಡು ಇಷ್ಟವಾಗುತ್ತಾರೆ. ಉಳಿದಂತೆ ಉಮಾಶ್ರೀ, ನೀನಾಸಂ ಅಶ್ವಥ್‌ ಮುಂತಾದವರು ನಟಿಸಿದ್ದಾರೆ.

ವಾಣಿ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next