Advertisement

Kashmir;ಉಗ್ರ ದಾಳಿಗೆ ಸಿಆರ್‌ಪಿಎಫ್ ಅಧಿಕಾರಿ ಹುತಾತ್ಮ

01:22 AM Aug 20, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದ ಉಧಾಂಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಮೂಲಗಳ ಪ್ರಕಾರ, ಸಿಆರ್‌ಪಿಎಫ್ ಬೆಟಾಲಿಯನ್‌ ಅನ್ನು ಮತ್ತಷ್ಟು ನಿಯೋಜಿಸುವ ಉದ್ದೇಶದಿಂದ ಸಿದ್ಧಪಡಿ ಸಲಾಗುತ್ತಿರುವ ಪೋಸ್ಟ್‌ನ ಪ್ರಗತಿ ಪರಿಶೀಲನೆ ಮಾಡುತ್ತಿದ್ದ ಸಿಆರ್‌ಪಿಎಫ್ ತಂಡದ ನೇತೃತ್ವವನ್ನು ಇನ್‌ಸ್ಪೆಕ್ಟರ್‌ ಕುಲದೀಪ್‌ ಕುಮಾರ್‌ ವಹಿಸಿದ್ದರು. ಈ ವೇಳೆ ಉಗ್ರರು ಹೊಂಚು ಹಾಕಿ ಅವರನ್ನು ಕೊಂದಿದ್ದಾರೆ.

Advertisement

ಜಮ್ಮುವಿನ ಗುಡ್ಡಗಾಡು ಪ್ರದೇಶಗಳಲ್ಲಿ ಉಗ್ರ ನಿಗ್ರಹ ಕ್ರಮಗಳ ಭಾಗವಾಗಿ ಈ ಹೊಸ ಪೋಸ್ಟ್‌ ಸ್ಥಾಪಿಸಲಾಗಿತ್ತು. ಸೋಮವಾರದ ಘಟನೆ ಮೂಲಕ ಪ್ರಸಕ್ತ ವರ್ಷ ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಸಾವಿನ ಸಂಖ್ಯೆ 74ಕ್ಕೇರಿದೆ. ಈ ಪೈಕಿ 21 ಯೋಧರು ಹುತಾತ್ಮರಾಗಿದ್ದರೆ, 35 ಉಗ್ರರು ಹತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next