Advertisement

ಕಾಸರಗೋಡು : ಮಹಾದಾನಿ ಕಿಳಿಂಗಾರು ಸಾಯಿರಾಂ ಭಟ್ ವಿಧಿವಶ

03:35 PM Jan 22, 2022 | Team Udayavani |

ಕಾಸರಗೋಡು: ಕೊಡುಗೈ ದಾನಿ, ಸಮಾಜಮುಖಿ ಚಿಂತಕ ನೂರಾರು ಜನರಿಗೆ ಮನೆಗಳನ್ನು ಒದಗಿಸಿಕೊಟ್ಟ ಮಹಾದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ (85) ಅವರು ಶನಿವಾರ ವಿಧಿವಶ ರಾಗಿದ್ದಾರೆ.

Advertisement

ಬಡ ಕುಟುಂಬಗಳನ್ನು ಗುರುತಿಸಿ 265 ಮನೆಗಳನ್ನು ದಾನ ನೀಡಿ ಎಲ್ಲರ ಮನದಲ್ಲಿ ನೆನಪಾಗಿ ಉಳಿದಿದ್ದಾರೆ. ನೂರಾರು ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ಆರ್ಥಿಕ ಸಹಾಯ ನೀಡಿದ್ದರು.

ಸತ್ಯ ಸಾಯಿಬಾಬಾ ಅವರ ಪರಮ ಭಕ್ತರಾಗಿದ್ದ ಅವರ ಹೆಸರಿನ ಮುಂದೆ ಸಾಯಿರಾಂ ಸೇರಿಕೊಂಡಿತ್ತು. ಕಿಳಿಂಗಾರಿನಲ್ಲಿ ಶ್ರೀ ಸಾಯಿ ಮಂದಿರವನ್ನು ಸ್ಥಾಪಿಸಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದರು.

ಪತ್ನಿ ಶಾರದಾ ಭಟ್, ಪುತ್ರ ಬದಿಯಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷರಾಗಿದ್ದ ಕೃಷ್ಣ ಭಟ್ ಸೇರಿ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next