Advertisement

Kasaragodu: ನೇಣು ಬಿಗಿದು ವಿದ್ಯಾರ್ಥಿಯ ಸಾವು

12:02 AM Aug 05, 2024 | Team Udayavani |

ಕಾಸರಗೋಡು: ಕಾನತ್ತೂರು ಸರಕಾರಿ ಯು.ಪಿ. ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾದ ಇರಿಯಣ್ಣಿ ಯು.ಪಿ. ಶಾಲೆಯ ಅಧ್ಯಾಪಕಿ ನಯನ ತೇಜಸ್ವಿ-ಟಿ.ಚಂದ್ರನ್‌ ದಂಪತಿಗಳ ಪುತ್ರ ಆಗ್ನೇಯ ಚಂದ್ರನ್‌(12) ಸ್ನಾನ ಕೊಠಡಿಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇ

Advertisement

ತರ ಮಕ್ಕಳೊಂದಿಗೆ ಆಟ ಆಡಿಕೊಂಡಿದ್ದ ಆಗ್ನೇಯ ಚಂದ್ರನ್‌ ಸ್ನಾನ ಮಾಡಲೆಂದು ಸ್ನಾನದ ಕೊಠಡಿಗೆ ತೆರಳಿದ್ದನು. ತುಂಬಾ ಹೊತ್ತಾದರೂ ಹೊರಗೆ ಬಾರದಿದ್ದುದರಿಂದ ಶೋಧ ಮಾಡಿದಾಗ ಸ್ನಾನಗೃಹದಲ್ಲಿ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಚೆಂಗಳದ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು: ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ
ಕಾಸರಗೋಡು: ಚೆರ್ಕಳ ಕೆ.ಕೆ. ನಗರದಲ್ಲಿ ನಿಯಂತ್ರಣ ಕಳೆದು ಕೊಂಡ ಕಾರೊಂದು ಢಿಕ್ಕಿ ಹೊಡೆದು ವಿದ್ಯುತ್‌ ಕಂಬ ಮುರಿದು ಬಿದ್ದಿದೆ. ಇದರಿಂದ ಚೆರ್ಕಳ ಜಾಲ್ಸೂರು ಅಂತಾರಾಷ್ಟ್ರೀಯ ರಸ್ತೆಯಲ್ಲಿ ಎರಡು ಗಂಟೆಗಳ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ವಿದ್ಯುತ್‌ ಕಂಬ ಮುರಿದು ಬಿದ್ದರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾದರು.

ಅಪ್ರಾಪ್ತ ವಯಸ್ಸಿನ ಬಾಲಕ ವಾಹನ ಚಾಲನೆ: ಕೇಸು
ಮಂಜೇಶ್ವರ: ಉಪ್ಪಳದಲ್ಲಿ 17ರ ಹರೆಯದ ಬಾಲಕ ದ್ವಿಚಕ್ರ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಆತನ ತಾಯಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಠಾಣೆ ಇನ್‌ಸ್ಪೆಕ್ಟರ್‌ ಕೆ. ರಾಜೀವ್‌ ಕುಮಾರ್‌ ನೇತೃತ್ವದಲ್ಲಿ ಉನ್ನತ ಪೊಲೀಸ್‌ ಅಧಿಕಾರಿಗಳ ನಿರ್ದೇಶದಂತೆ ವಾಹನ ತಪಾಸಣೆಯನ್ನು ಬಿಗುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next