Advertisement

ಕಾಸರಗೋಡು ಅಪರಾಧ ಸುದ್ದಿಗಳು: ರೈಲು ಢಿಕ್ಕಿ: ಯುವಕ ಸಾವು

10:13 PM Apr 15, 2023 | Team Udayavani |

ಕಾಸರಗೋಡು : ರಾವಣೇಶ್ವರ ಪಾಣಂತೋಡ್‌ ನಿವಾಸಿ, ಅಧ್ಯಾಪಕ ಕೃಷ್ಣನ್‌ ಅವರ ಪುತ್ರ ಫಾರ್ಮಸಿಸ್ಟ್‌ ಕೆ. ಸುಜಿಲ್‌(28) ಕಾಂಞಂಗಾಡ್‌ ಮಾಣಿಕೋತ್‌ ಗ್ರ್ಯಾಂಡ್ ಆಡಿಟೋರಿಯಂ ಪರಿಸರದಲ್ಲಿ ರೈಲು ಢಿಕ್ಕಿ ಹೊಡೆದು ಸಾವಿಗೀಡಾದ ಘಟನೆ ನಡೆದಿದೆ. ನಾಪತ್ತೆಯಾಗಿದ್ದ ಕೆ. ಸುಜಿಲ್‌ ಅವರ ಶೋಧ ನಡೆಯುತ್ತಿದ್ದಂತೆ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Advertisement

ರೆಸಾರ್ಟ್‌ ಬೆಂಕಿಗಾಹುತಿ
ಕಾಸರಗೋಡು: ನೀಲೇಶ್ವರ ಒಳಿಂಞ ವಳಪ್ಪಿನ ಹೆರ್ಮಿಟೇಜ್‌ ರೆಸಾರ್ಟ್‌ ಶನಿವಾರ ಮುಂಜಾನೆ ಬೆಂಕಿಗಾಹುತಿಯಾಗಿದೆ. ವಿಷು ಹಬ್ಬದ ಅಂಗವಾಗಿ ಯಾರೋ ಸಿಡಿಸಿದ ಸುಡುಮದ್ದು ರೆಸಾರ್ಟ್‌ ಮೇಲೆ ಬಿದ್ದಿದ್ದು, ಇದರಿಂದ ಬೆಂಕಿ ಹತ್ತಿಕೊಂಡಿತೆನ್ನಲಾಗಿದೆ. ಹುಲ್ಲು ಹಾಸಿನ ಕಾಟೇಜ್‌ನ ಮೇಲ್ಛಾವಣಿಗೆ ಬೆಂಕಿ ಹತ್ತಿಕೊಂಡಿದ್ದು, ರೆಸಾರ್ಟ್‌ನಲ್ಲಿದ್ದವನ್ನು ಶೀಘ್ರದಲ್ಲೇ ತೆರವುಗೊಳಿಸಲು ಸಾಧ್ಯವಾದುದರಿಂದ ಸಂಭವನೀಯ ಅಪಾಯ ತಪ್ಪಿದೆ. ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದೆ. ಕಾರ್ಯಾಲಯ ಸಹಿತ ರೆಸಾರ್ಟ್‌ ಬೆಂಕಿಗಾಹುತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next