Advertisement

ಕಾಸರಗೋಡು: ರೈಲುಗಳಿಗೆ ಕಲ್ಲೆಸೆತ; ಇಬ್ಬರಿಗೆ ಗಾಯ

01:11 AM Jul 31, 2022 | Team Udayavani |

ಕುಂಬಳೆ: ಕಾಸರಗೋಡಿನ ಎರಿಯಾಲ್‌ ಮತ್ತು ಚೇರಂಗೈಯಲ್ಲಿ ಶುಕ್ರವಾರ ಸಂಜೆ ಕಿಡಿಗೇಡಿಗಳು ಮಂಗಳೂರು -ಕಣ್ಣೂರು ಮತ್ತು ಮಂಗಳೂರು – ತಿರುವನಂಪುರ ರೈಲುಗಳಿಗೆ ಕಲ್ಲು ತೂರಾಟ ನಡೆಸಿದ್ದು ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.

Advertisement

ಐವರು ಬಾಲಕರು ಕಲ್ಲು ಎಸೆದು ಓಡಿರುವುದನ್ನು ನೋಡಿರು ವುದಾಗಿ ಪ್ರಯಾಣಿಕರು ರೈಲ್ವೇ ಪೊಲೀಸರಲ್ಲಿ ತಿಳಿಸಿದ್ದಾರೆ.

ಹಿಂದಿನಿಂದಲೂ ರೈಲಿಗೆ ಕಲ್ಲೆಸೆಯುತ್ತಿದ್ದು ಕಾಸರಗೋಡು ಜಿಲ್ಲೆಯ ಬಂದ್ಯೋಡು ಮುಟ್ಟಂ, ಬೇಕಲ ಬಳಿಯ ಕೋಟಿ ಕುಳಂ ಕಣ್ಣೂರು ಜಿಲ್ಲೆಯ ಪಾಪ್ಪಿನಶೇರಿ ಮುಂತಾದ 7 ಕಡೆ ಗಳಲ್ಲಿ ಕೆಲವು ದಿನಗಳ ಹಿಂದೆ ರೈಲು ಹಳಿಯಲ್ಲಿ ಕಗ್ಗಲ್ಲಿನ ತುಂಡುಗಳನ್ನಿರಿಸಿ ಬುಡಮೇಲುಗೊಳಿಸುವ ಕೃತ್ಯ ನಡೆದಿದೆ.

ಆದರೆ ಇಲಾಖೆಯ ಉದ್ಯೋಗಿಳು ಮಾಹಿತಿ ತಿಳಿದು ಕಲ್ಲನ್ನು ತೆರವುಗೊಳಿಸಿ ಸಂಭಾವ್ಯ ದುರಂತವನ್ನು ತಪ್ಪಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next