Advertisement

ಕಾಸರಗೋಡು: ಕೋಟ್ಯಂತರ ವಂಚನೆ: ಚೇರ್‌ಮನ್‌ ಸೆರೆ

12:46 AM Jan 17, 2023 | Team Udayavani |

ಕಾಸರಗೋಡು: ಹಲವರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ವಂಚಿಸಿದ ಆರೋಪಿ ಕುಂಡಂಕುಳಿ ನಿವಾಸಿ, ಸಂಸ್ಥೆಯ ಚೇರ್‌ಮನ್‌ ಡಿ. ವಿನೋದ್‌ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಜನರಿಗೆ ವಿವಿಧ ಭರವಸೆ ನೀಡಿ ಕೋಟ್ಯಂತರ ರೂಪಾಯಿ ಠೇವಣಿ ಪಡೆದು ವಂಚಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.

ವಂಚನೆಗೀಡಾದವರಲ್ಲಿ ಬಹುತೇಕ ಮಂದಿ ಕುಟ್ಟಿಕ್ಕೋಲ್‌ ಪಂಚಾಯತ್‌ ನಿವಾಸಿಗಳಾಗಿದ್ದಾರೆ.

ಈ ಬಗ್ಗೆ ಬೇಡಗಂ ಪೊಲೀಸರಿಗೆ ದೂರು ನೀಡಲಾಗಿತ್ತು. ತಿಂಗಳ ಹಿಂದೆ ವಿನೋದ್‌ ಕುಮಾರ್‌ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next