Advertisement

Kasaragod: ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ 2.5 ಲಕ್ಷ ರೂ. ವಂಚನೆ

05:33 PM Aug 17, 2024 | Team Udayavani |

ಕಾಸರಗೋಡು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2.5 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪಿಲಿಕುಂಜೆ ನಿವಾಸಿ, ಯೂತ್‌ ಕಾಂಗ್ರೆಸ್‌ ಮಂಡಲ ಅಧ್ಯಕ್ಷ ದಿಲೀಪ್‌ ದಿನೇಶ್‌ ಮತ್ತು ದಿನೇಶ್‌ ಕುಮಾರ್‌ ವಿರುದ್ಧ ನಾಗವೇಣಿ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಪುತ್ರನಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2022 ಮೇ ತಿಂಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಖಾತೆ ಮೂಲಕ 1 ಲಕ್ಷ ರೂ. ದಿಲೀಪ್‌ ದಿನೇಶ್‌ಗೆ ನೀಡಿದ್ದು, ಆ ಬಳಿಕ ಒಂದೂವರೆ ಲಕ್ಷ ರೂ.ವನ್ನು ಗೂಗಲ್‌ ಪೇ ಮೂಲಕ ಹಲವು ಬಾರಿಯಾಗಿ ನೀಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ವರ್ಷ ಎರಡು ಸಂದರೂ ಇನ್ನೂ ಉದ್ಯೋಗ ಕೊಡಿಸಿಲ್ಲ. ಅಲ್ಲದೆ ಹಣವನ್ನು ಹಿಂತಿರುಗಿಸಿಲ್ಲವೆಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next