Advertisement

ಕಾಲೇಜು ವಿದ್ಯಾರ್ಥಿನಿ ಕೊಲೆ: ಕಾಸರಗೋಡಿಗೆ ಪರಾರಿಯಾಗುವ ವೇಳೆ ದಂಪತಿ ಬಂಧನ

11:52 PM May 04, 2023 | Team Udayavani |

ಕಾಸರಗೋಡು: ತಮಿಳುನಾಡು ಕೊಟ್ಟಾಂಪೆಟ್ಟಿ ಗೌರಿನಗರ ಅಪಾರ್ಟ್‌ ಮೆಂಟ್‌ನಲ್ಲಿ ವಾಸಿಸುತ್ತಿರುವ ಮೂಲತಃ ಕೊಯಂಬತ್ತೂರು ಇಡೆಯಂಬಾರಂ ಪಾಳಯದ ನಿವಾಸಿ, ಖಾಸಗಿ ಕಾಲೇಜೊಂದರ ಪದವಿ ವಿದ್ಯಾರ್ಥಿನಿ ಸುಬ್ಬಲಕ್ಷ್ಮೀ(25)ಯನ್ನು ಕೊಲೆಗೈದ ಪ್ರಕರಣದ ಆರೋಪಿಗಳನ್ನು ಅಲ್ಲಿಂದ ತಪ್ಪಿಸಿ ಕಾಸರಗೋಡು ಜಿಲ್ಲೆಗೆ ಪರಾರಿಯಾಗುವ ವೇಳೆ ಕಣ್ಣೂರು ತಾವರಕ್ಕೆರೆ ವಸತಿಗೃಹವೊಂದರಲ್ಲಿ ಪೊಲೀಸರು ಬಂಧಿಸಿದ್ದಾರೆ.

Advertisement

ತಮಿಳುನಾಡು ಪೊಳ್ಳಾಚಿ ಮಾಲಿಂಗಪುರಂ ನಿವಾಸಿ ಸುಜೈ (31) ಮತ್ತು ಎಂಟು ತಿಂಗಳ ಗರ್ಭಿಣಿಯಾಗಿರುವ ಆತನ ಪತ್ನಿ ರೇಶ್ಮಾ (25)ಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ನಡೆದ ಬಳಿಕ ಈ ಇಬ್ಬರು ಬೈಕ್‌ನಲ್ಲಿ ಪೊಳ್ಳಾಚಿಯಿಂದ ತಪ್ಪಿಸಿಕೊಂಡು ಕೇರಳಕ್ಕೆ ಪರಾರಿಯಾಗುತ್ತಿರುವ ಕುರಿತು ತಮಿಳುನಾಡು ಪೊಲೀಸರಿಗೆ ಮಾಹಿತಿ ಲಭಿಸಿತ್ತು.

ಈ ಮಾಹಿತಿಯನ್ನು ಅವರು ತುರ್ತಾಗಿ ಕೇರಳ ಪೊಲೀಸರಿಗೂ ನೀಡಿದ್ದರು. ಕಣ್ಣೂರಿಗೆ ಬಂದ ದಂಪತಿ ಅಲ್ಲಿಂದ ಕಾಸರಗೋಡಿನತ್ತ ತೆರಳುವ ಸಿದ್ಧತೆಯಲ್ಲಿ ತೊಡಗಿದ್ದರು. ಪರಾರಿಯಾಗುವ ಮುನ್ನ ಪೊಲೀಸರು ಬಂಧಿಸಿದ್ದು, ಬೈಕ್‌ ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next