Advertisement

ಪೊಲೀಸ್‌ ಕಸ್ಟಡಿಯಿಂದ ಆರೋಪಿ ಪರಾರಿ ; ಮೂವರು ಪೊಲೀಸರ ಅಮಾನತು

11:46 PM May 24, 2022 | Team Udayavani |

ಕಾಸರಗೋಡು : ನ್ಯಾಯಾಲಯಕ್ಕೆ ಹಾಜರುಪಡಿಸಲು ಮಾದಕವಸ್ತು ಪ್ರಕರಣದ ಆರೋಪಿ ಆಲಂಪಾಡಿ ನಿವಾಸಿ ಅಮೀರಲಿ (23)ನನ್ನು ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಪೊಲೀಸ್‌ ಕಸ್ಟಡಿಯಿಂದ ಪರಾರಿಯಾಗಿದ್ದಾನೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಸಶಸ್ತ್ರ ಮೀಸಲು ಪೊಲೀಸ್‌ ಶಿಬಿರದ ಎಎಸ್‌ಐ ಸಜೀವನ್‌ ಕೆ., ಸಿಪಿಒಗಳಾದ ಜಾಸೀರ್‌ ಮತ್ತು ಅರುಣ್‌ನನ್ನು ಕಣ್ಣೂರು ರೇಂಜ್‌ ಡಿಐಜಿ ರಾಹುಲ್‌ ಆರ್‌. ನಾಯರ್‌ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ವಿದ್ಯಾರ್ಥಿನಿಗೆ ಕಿರುಕುಳಕ್ಕೆ ಯತ್ನ; ಬಂಧನ
ಮುಳ್ಳೇರಿಯ: ಶಾಲಾ ಪರಿಸರದಲ್ಲಿ ನಗ್ನವಾಗಿ ಬಾಲಕಿಯನ್ನು ಅಪಮಾನಗೈಯ್ಯಲು ಯತ್ನಿಸಿದ ಆರೋಪದಂತೆ ಕುಂಬಾxಜೆ ಅನ್ನಡ್ಕದ ಹನೀಫ್‌(40)ನನ್ನು ಆದೂರು ಪೊಲೀಸರು ಪೋಕ್ಸೋ ಕೇಸು ದಾಖಲಿಸಿ ಬಂಧಿಸಿದ್ದಾರೆ.

ರವಿವಾರ ಸ್ಪೆಷಲ್‌ ಕ್ಲಾಸ್‌ಗೆ ಹಾಜರಾಗಲು ಬಾಲಕಿ ಶಾಲೆಗೆ ತೆರಳಿದ್ದಳು. ಬಸ್‌ನಿಂದಿಳಿದು ಶಾಲೆಗೆ ನಡೆದು ಹೋಗುತ್ತಿದ್ದ ಬಾಲಕಿಯನ್ನು ಬೈಕ್‌ನಲ್ಲಿ ಹಿಂಬಾಲಿಸಿ, ಶಾಲಾ ಪರಿಸರದಲ್ಲಿ ಕಾದು ನಿಂತು, ಬಾಲಕಿ ಶಾಲೆಗೆ ತಲುಪಿದಾಗ ನಗ್ನನಾಗಿ ಕಿರುಕುಳ ನೀಡಲು ಯತ್ನಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಹನೀಫ್‌ನ ಕೃತ್ಯಗಳು ಶಾಲೆಯ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ :ದಕ್ಷಿಣ ಕನ್ನಡ: ಬಿಡುವು ನೀಡಿದ ಮಳೆ; ಕೃಷಿಕರಲ್ಲಿ ಆತಂಕ

Advertisement
Advertisement

Udayavani is now on Telegram. Click here to join our channel and stay updated with the latest news.

Next