Advertisement

ಸ್ನೇಹಿತರ ಜತೆ ಪ್ರವಾಸ ತೆರಳಿ ಮರಳಿದ ಯುವಕ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ  

05:54 PM May 09, 2022 | Team Udayavani |

ಉಪ್ಪಳ: ಸ್ನೇಹಿತರ ಜತೆ ಪ್ರವಾಸಕ್ಕೆ ತೆರಳಿ ಮೇ 8ರಂದು ಮಧ್ಯರಾತ್ರಿ ಮನೆಗೆ ತಲುಪಿದ ಯುವಕನೋರ್ವ ಸೋಮವಾರ ಮುಂಜಾನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

Advertisement

ಉಪ್ಪಳ ಸಮೀಪದ ಮುಳಿಂಜ ಮಹಾನಗರ ನಿವಾಸಿ ಸುಧೀರ್‌ (38) ಮೃತಪಟ್ಟ ಯುವಕನಾಗಿದ್ದಾರೆ. ಇವರು ಕೈಕಂಬದಲ್ಲಿ ಅಲ್ಯುಮಿನಿಯಂ ಶೋರೂಂನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಈ ಸಂಸ್ಥೆಯ ಇತರ ಸುಮಾರು 13 ಮಂದಿ ಕಾರ್ಮಿಕರ ಜೊತೆ ಶನಿವಾರ ಸಂಜೆ ಸುಧೀರ್‌ ವಯನಾಡಿಗೆ ಪ್ರವಾಸಕ್ಕೆ ತೆರಳಿದ್ದರು.

ಮೇ 8 ರಂದು ಮಧ್ಯರಾತ್ರಿ 1.30ರ ವೇಳೆ ಜೊತೆಯಲ್ಲಿದ್ದವರು ಮನೆಗೆ ಬಿಟ್ಟಿದ್ದರು. ಮಂಚದಲ್ಲಿ ನಿದ್ದೆ ಮಾಡಿದ್ದ ಸುಧೀರ್‌ ಸೋಮವಾರ ಬೆಳಗ್ಗೆ ಮಂಚದಿಂದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ಮನೆಯವರು ಎಬ್ಬಿಸಿದರೂ ಎಚ್ಚರಗೊಳ್ಳದ ಹಿನ್ನೆಲೆಯಲ್ಲಿ ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ತಪಾಸಣೆ ನಡೆಸಿದಾಗ ಮೃತಪಟ್ಟಿರುವುದು ತಿಳಿದು ಬಂತು.

Advertisement

ದಿಢೀರ್‌ ಸಾವಿನ ಬಗ್ಗೆ ಮನೆಯವರು ಶಂಕೆ ವ್ಯಕ್ತಪಡಿಸಿದ್ದು, ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಇದನ್ನೂ ಓದಿ:ಬಲ್ಲಾಳ್‌ಭಾಗ್‌ ಸರಣಿ ಅಪಘಾತ ಪ್ರಕರಣ: ಚಾಲಕನ ಪರೀಕ್ಷಾ ವರದಿ ನೆಗೆಟಿವ್‌: ಎನ್‌.ಶಶಿಕುಮಾರ್‌

ಸ್ಕೂಟರ್‌ ಅಪಘಾತ: ಗಾಯಾಳು ಮಹಿಳೆ ಸಾವು
ಕಾಸರಗೋಡು: ಸ್ಕೂಟರ್‌ ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೂಡ್ಲು ವಿವೇಕಾನಂದನಗರ ಗುರುಕೃಪಾದ ಕೆ. ಪುಷ್ಪಲತಾ (42) ಸಾವಿಗೀಡಾದರು.

ಇವರು ತಲಪಾಡಿ ಆಯುರ್ವೇದ ಮೆಡಿಕಲ್‌ ಕಾಲೇಜಿನಲ್ಲಿ ಲ್ಯಾಬ್‌ ಟೆಕ್ನೀಶಿಯನ್‌ ಆಗಿದ್ದರು. ಮೇ 2ರಂದು ವಿವೇಕಾನಂದ ನಗರದಲ್ಲಿ ಅಪಘಾತ ಸಂಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next