Advertisement

ಬೇಕಲ ಕೋಟೆ: ಹಾನಿಯಾದ ಬುರುಜು ದುರಸ್ತಿ ಕಾರ್ಯ ಆರಂಭ

12:31 AM Nov 26, 2022 | Team Udayavani |

ಕಾಸರಗೋಡು: ವರ್ಷಗಳ ಹಿಂದೆ ಗಾಳಿ ಮಳೆಗೆ ಹಾನಿಗೀಡಾಗಿದ್ದ ಬೇಕಲ ಕೋಟೆಯ ಬುರುಜು ದುರಸ್ತಿ ಕಾಮಗಾರಿ ಆರಂಭಗೊಂಡಿದೆ. ಭಾರತೀಯ ಪುರಾತತ್ವ ಇಲಾಖೆಯ ನೇತೃತ್ವದಲ್ಲಿ ದುರಸ್ತಿ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ.

Advertisement

ಖ್ಯಾತ ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿರುವ ಕನ್ನಡಿಗರ ಸಾಹಸದ ಪ್ರತೀಕವಾದ ಬೇಕಲ ಕೋಟೆಯ ಒಂದು ಭಾಗದ ಬುರುಜು 2019ರಲ್ಲಿ ಭಾರೀ ಗಾಳಿ ಮಳೆಗೆ ಕುಸಿದು ಬಿದ್ದಿತ್ತು. ಬೇಕಲ ಕೋಟೆಗೆ ಪ್ರವೇಶಿಸುವ ಬಲ ಭಾಗದ ದಕ್ಷಿಣಕ್ಕೆ ಎರಡನೇ ಬುರುಜಿನ ಭಿತ್ತಿ ಗಾಳಿ ಮಳೆಗೆ ಕುಸಿದಿದ್ದು, ನೂರಾರು ಕೆಂಗಲ್ಲುಗಳು ನೆಲಕ್ಕುರಳಿತ್ತು. ಕೋಟೆಯ ನಿರೀಕ್ಷಣ ಕೇಂದ್ರವಾದ ಬುರುಜಿಗೆ ಹಾನಿ ಯಾಗಿರುವುದರಿಂದ ಇದರ ಮೇಲೆ ಪ್ರವಾಸಿಗರ ಪ್ರವೇಶವನ್ನು ಆರ್ಕಿ ಯಾಲಜಿಕಲ್‌ ಸರ್ವೆ ಆಫ್ ಇಂಡಿಯಾ (ಎ.ಎಸ್‌.ಎ.) ನಿಷೇಧಿ ಸಿತ್ತು. ಈ ಪ್ರದೇಶಕ್ಕೆ ಪ್ರವಾಸಿಗರು ಸಾಗದಂತೆ ಕಬ್ಬಿಣದ ಪೈಪ್‌ ಗಳನ್ನು ಬಳಸಿ ತಡೆಯೊಡ್ಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next