Advertisement

ಕಸಾಪ ಚುನಾವಣೆ: ಅವ್ಯವಸ್ಥೆಗೆ ಮತದಾರರ ಆಕ್ರೋಶ

03:35 PM Nov 21, 2021 | Shwetha M |

ಮುದ್ದೇಬಿಹಾಳ: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಇಲ್ಲಿನ ತಹಶೀಲ್ದಾರ್ ಕಚೇರಿ ಇರುವ ಮಿನಿ ವಿಧಾನಸೌಧದ ಮೊದಲ ಅಂತಸ್ತಿನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ವಿಕಚೇತನರಿಗೆ ಮತ ಹಾಕಲು ಯಾವುದೇ ಅನುಕೂಲ ಮಾಡದಿರುವುದು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ತಾಲೂಕು ಕೇಂದ್ರ ಸ್ಥಾನದಲ್ಲಿ ಮತಗಟ್ಟೆ ಸ್ಥಾಪಿಸಿರುವುದರಿಂದ 20 ಕಿಮಿ ದೂರದ ನಾಲತವಾಡ ಪಟ್ಟಣದಿಂದ ವಿಕಲಚೇತನ ಮಹಿಳೆ ಅನ್ನಪೂರ್ಣ ಡೇರೇದ ಮತದಾನ ಮಾಡಲು ಬಂದಿದ್ದರು. ಆದರೆ ಅವರಿಗೆ ಯಾವುದೇ ವ್ಯವಸ್ಥೆ ಕಲ್ಪಿಸದ ಕಾರಣ ಆಕೆಯನ್ನು ಕುರ್ಚಿಯಲ್ಲಿ ಕೂಡಿಸಿ ಆ ಕುರ್ಚಿ ಸಮೇತ ಮೇಲೆ ಎತ್ತಿಕೊಂಡು ಮತದಾನ ಸ್ಥಳಕ್ಕೆ ಕರೆತರುವ ಮೂಲಕ ಅಲ್ಲಿದ್ದ ಕಾರ್ಯಕರ್ತರು ಸಹಕರಿಸಿದರು. ತಾಲೂಕಾಡಳಿತದ ಅವ್ಯವಸ್ಥೆಗೆ ಮತದಾರರು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next