Advertisement

Karwar; ತುಂಡಾದ ಬಸ್ ಕ್ಲಚ್ ಪ್ಲೇಟ್: ತಪ್ಪಿದ ಅನಾಹುತ

01:07 PM Jan 02, 2024 | Team Udayavani |

ಕಾರವಾರ: ಕಾರವಾರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಚಲಿಸುವಾಗಲೇ ಕ್ಲಚ್ ಪ್ಲೇಟ್ ತುಂಡಾದ ಪರಿಣಾಮ ಪ್ರಯಾಣಿಕರು ಗಾಯವಾದ ಘಟನೆ ಕಾರವಾರ ನಗರದ ಹಬ್ಬುವಾಡದ ಗೋಲ್ಡನ್ ಬೇಕರಿ ಸಮೀಪ ನಡೆದಿದೆ.

Advertisement

ಬಸ್ ನಗರವನ್ನು ದಾಟುವ ಮುನ್ನ ಕ್ಲಚ್ ಪ್ಲೇಟ್ ತುಂಡಾಗಿದೆ. ‌ಬಸ್ ಉರುಳಿದ್ದರೆ ಭಾರೀ ಪ್ರಮಾಣದಲ್ಲಿ ಜನರಿಗೆ ಗಾಯಗಳಾಗುತ್ತಿದ್ದವು. ಅದೃಷ್ಟವಶಾತ್ ಬಸ್ ವೇಗ ಕಡಿಮೆ ಇದ್ದ ಕಾರಣ ಹೆಚ್ಚಿನ ಅನಾಹುತವಾಗಿಲ್ಲ. ಬಸ್ ನಲ್ಲಿ 50 ಜನ ಪ್ರಯಾಣಿಕರಿದ್ದು, 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೇ ಬಸ್ ರಸ್ತೆ ಮಧ್ಯೆ ನಿಂತ ಪರಿಣಾಮ ಹಬ್ಬುವಾಡ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಸಂಚಾರ ಒಂದು ತಾಸು ಬಂದ್ ಆಗಿತ್ತು. ಬಸ್ ಸ್ಥಳಾಂತರ ಮಾಡಿದ ನಂತರ ಕಾರವಾರ ಹಬ್ಬುವಾಡ ರಸ್ತೆಯಲ್ಲಿ ವಾಹನ ಸಂಚಾರ ಪುನಃ ಆರಂಭವಾಗಿದೆ.

ಗುಜರಿ ಬಸ್ ಬಿಟ್ಟು ಜನರ ಪ್ರಾಣದ ಜೊತೆ ಚೆಲ್ಲಾಟ ವಾಡುವ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಡಿಪೋ ಮ್ಯಾನೇಜರ್ ಬೇಜವಾಬ್ದಾರಿ ಬಸ್ ಅಪಘಾತಕ್ಕೆ ಕಾರಣ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next