Advertisement

25ರವರೆಗೆ ಕಾರ್ತಿಗೆ ನ್ಯಾಯಾಂಗ ಬಂಧನ

07:30 AM Mar 13, 2018 | |

ಹೊಸದಿಲ್ಲಿ: ಐಎನ್‌ಎಕ್ಸ್‌ ಮಾಧ್ಯಮ ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಕೇಂದ್ರದ ಮಾಜಿ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐನ ವಿಶೇಷ ಕೋರ್ಟ್‌ ಮತ್ತೆ 13 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಅದಕ್ಕೆ ಪೂರಕವಾಗಿ ಅವರನ್ನು ಹೊಸದಿಲ್ಲಿಯ ತಿಹಾರ್‌ ಜೈಲಿಗೆ ವರ್ಗಾಯಿಸಲಾಗಿದೆ. 

Advertisement

ಇದೇ ವೇಳೆ, ತಮಗೆ ಪ್ರತ್ಯೇಕ ಸೆಲ್‌ ಮತ್ತು ಮನೆಯ ಆಹಾರ ನೀಡಬೇಕು ಎಂಬ ಕಾರ್ತಿ ಅವರ ಬೇಡಿಕೆಯನ್ನು ವಿಶೇಷ ಕೋರ್ಟ್‌ ತಿರಸ್ಕರಿಸಿದೆ. ಆದರೆ ಕಾರಾಗೃಹದ ವೈದ್ಯರ ಪರಿಶೀಲನೆಗೆ ಒಳಪಟ್ಟು ಔಷಧಗಳನ್ನು ತರಿಸಿಕೊಳ್ಳಲು ಅನುಮತಿ ನೀಡಿದೆ. ಮಾ.25ರಂದು ಅವರನ್ನು ಕೋರ್ಟಿಗೆ ಹಾಜರುಪಡಿಸಬೇಕಿದೆ. ಕಾರ್ತಿ ಅವರ 3 ದಿನಗಳ ಸಿಬಿಐ ಕಸ್ಟಡಿ ಅವಧಿ ಮುಕ್ತಾಯವಾಗಿದ್ದಕ್ಕೆ ಅವರನ್ನು ಕೋರ್ಟ್‌ ಗೆ ಹಾಜರುಪಡಿಸಲಾಗಿತ್ತು.  ಕಾರ್ತಿಯನ್ನು ಮತ್ತೆ ವಶಕ್ಕೊಪ್ಪಿಸುವಂತೆ ಸಿಬಿಐ ಕೇಳದೆ ಇರುವುದರಿಂದ ಕೋರ್ಟ್‌ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿತು. ಇದೇ ವೇಳೆ ಕಾರ್ತಿ ಅವರು ಪ್ರಕರಣದಲ್ಲಿ ಜಾಮೀನು ನೀಡುವಂತೆ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next