Advertisement

ಆಧುನಿಕ ತಂಗುದಾಣಕ್ಕೆ ಅಸ್ತು

12:30 AM Mar 10, 2019 | |

ಹೊಸದಿಲ್ಲಿ: ಭಾರತ ಮತ್ತು ದಿಲ್ಲಿ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಂಡಿರುವ ಕರ್ತಾರ್ಪುರ ಕಾರಿಡಾರ್‌ ಯೋಜನೆಯಡಿ, ಅತ್ಯಾಧುನಿಕವಾದ ಪ್ರಯಾಣಿಕರ ತಂಗುದಾಣವೊಂದನ್ನು ನಿರ್ಮಿಸಲು ಭಾರತ ನಿರ್ಧರಿಸಿದೆ. ಸುಮಾರು 50 ಎಕರೆ ಜಾಗದಲ್ಲಿ, ಅಂದಾಜು 190 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ದಿಲ್ಲಿದ ಗಡಿಯೊಳಗಿರುವ ಗುರುದ್ವಾರ ಕರ್ತಾರ್ಪುರ ಪುಣ್ಯಕ್ಷೇತ್ರಕ್ಕೆ ಹೋಗಬಯಸುವ ಭಾರತೀಯ ಯಾತ್ರಾರ್ಥಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

Advertisement

ಕರ್ತಾರ್ಪುರ ಕಾರಿಡಾರ್‌ನಲ್ಲಿ ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸುವ ಹಾಗೂ ಅವುಗಳನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿರುವ “ಲ್ಯಾಂಡ್‌ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ’ಕ್ಕೆ (ಎಲ್‌ಪಿಎಐ) ಈ ಹೊಸ ಪ್ರಯಾಣಿಕರ ತಂಗುದಾಣ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ. ಜತೆಗೆ, ತಂಗು ದಾಣದ ಕಟ್ಟಡವನ್ನು ಸಿಖ್‌ ಸಮುದಾಯದ ಸಂಸ್ಕೃತಿ ಹಾಗೂ ಭಾವನೆಗಳಿಗೆ ಪ್ರತೀಕವಾಗಿ ನಿರ್ಮಿಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ. 

50 ಎಕರೆಯಲ್ಲಿ, 190 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ಲ್ಯಾಂಡ್‌ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾಕ್ಕೆ (ಎಲ್‌ಪಿಎಐ)  ನಿರ್ಮಾಣದ ಹೊಣೆ

Advertisement

Udayavani is now on Telegram. Click here to join our channel and stay updated with the latest news.

Next