Advertisement

ಪರೇಶ್ ಸಾವು ಕೇಸ್; ತಂದೆ ಕಮಲಾಕರ್ ಹೇಳೋದೇನು ಗೊತ್ತಾ?

01:52 PM Dec 13, 2017 | Team Udayavani |

ಹೊನ್ನಾವರ: ಪೊಲೀಸರು ಹೇಳುವ ರೀತಿ ಕಾಲು ಜಾರಿ ಬಿದ್ದು ನನ್ನ ಮಗ ಸಾವನ್ನಪ್ಪಿಲ್ಲ. ಪರೇಶ್ ಸಾವು ಸಹಜ ಸಾವಲ್ಲ, ಕೊಲೆ ಮಾಡಿಯೇ ಕೆರೆಯಲ್ಲಿ ಬಿಸಾಕಲಾಗಿದೆ…ಇದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪರೇಶ್ ಮೇಸ್ತ ತಂದೆ ಕಮಲಾಕರ್ ಅವರ ನುಡಿ.

Advertisement

ಪರೇಶ್ ಮೇಸ್ತ ಸಾವಿನ ಕುರಿತು ಖಾಸಗಿ ಟಿವಿ ಚಾನೆಲ್ ವೊಂದರ ಜತೆ ಮಾತನಾಡಿದ ಅವರು, ನನ್ನ ಮಗನನ್ನು ಕೊಲೆ ಮಾಡಿಯೇ ಕೆರೆಗೆ ಬಿಸಾಕಲಾಗಿದೆ. ಅವನ ತಲೆಗೆ ರಾಡ್ ನಿಂದ ಹೊಡೆಯಲಾಗಿದೆ, ಕೈಯಲ್ಲಿದ್ದ ಟ್ಯಾಟೊವನ್ನು ಚೂರಿಯಿಂದ ಕತ್ತರಿಸಿದ್ದರು ಎಂದು ಆರೋಪಿಸಿದರು.

ನಮ್ಮ ಮಗನನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ನಮ್ಮ ಸಮಾಜದ ಬಂಧುಗಳು ಸೇರಿ 10ಸಾವಿರಕ್ಕೂ ಹೆಚ್ಚು ಮಂದಿ ಶವವನ್ನು ನೋಡಿದ್ದೇವೆ, ಇದರಲ್ಲಿ ಯಾವ ಸುಳ್ಳು ಹೇಳಿಕೆಯೂ ಇಲ್ಲ. ನನ್ನ ಮಗನಿಗೆ ಈಜು ಬರುತ್ತದೆ, ಆತ ಕಾಲು ಜಾರಿ ಬಿದ್ದು ಸಾವನ್ನಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next