Advertisement

ಸಚಿವರ ಗೈರು: ಕಾಂಗ್ರೆಸ್‌ ಸದಸ್ಯರಿಂದ ತರಾಟೆ

08:50 PM Sep 15, 2022 | Team Udayavani |

ಬೆಂಗಳೂರು: ಪ್ರಶ್ನೋತ್ತರ ವೇಳೆಯಲ್ಲಿ ಸಚಿವರ ಗೈರು ಕುರಿತು ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

Advertisement

ಗುರುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಾಗಿದ್ದ ಕಲಾಪ, ಸದಸ್ಯರು ಬಾರದ ಕಾರಣ 11.20ಕ್ಕೆ ಪ್ರಾರಂಭವಾಯಿತು. ಸ್ಪೀಕರ್‌ ಪ್ರಶ್ನೋತ್ತರ ಕಲಾಪ ಆರಂಭಿಸಲು ಮುಂದಾದಾಗ ವಿಪಕ್ಷ ಉಪನಾಯಕ ಯು. ಟಿ. ಖಾದರ್‌, ಇಲ್ಲಿ ಯಾವ ಮಂತ್ರಿಗಳೂ ಇಲ್ಲ. ಸೀಟುಗಳೆಲ್ಲ ಖಾಲಿಯಾಗಿವೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌, ಪ್ರಶ್ನೋತ್ತರಕ್ಕೆ ಯಾರು ಬೇಕೋ ಅವರಿದ್ದಾರೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಕೃಷ್ಣಬೈರೇಗೌಡ, ಸಚಿವರು ಮೊದಲೇ ಅಧಿವೇಶನಕ್ಕೆ ಸರಿಯಾಗಿ ಬರುತ್ತಿಲ್ಲ. ಪೀಠದಿಂದ ಇಂತಹ ಅಭಿಪ್ರಾಯ ವ್ಯಕ್ತವಾದರೆ ಗೈರಾಗಲು ಅನುಮತಿ ಸಿಕ್ಕಂತೆ ಎಂದು ಭಾವಿಸುತ್ತಾರೆ ಎಂದರು.

ಆಗ ಸ್ಪೀಕರ್‌ ಪ್ರತಿಕ್ರಿಯಿಸಿ, ಸಚಿವರ ಗೈರು ವಿಚಾರದಲ್ಲಿ ನಾನು ಎಷ್ಟು ಗಂಭೀರವಾಗಿದ್ದೇನೆ ಎಂಬುದು ನಿಮಗೂ ಗೊತ್ತಿದೆ. ಅಂತಹ ಸಮಯ ಬಂದಾಗ ನೋಡೋಣ ಎಂದರು. ಅನಂತರ ಪ್ರಶ್ನೋತ್ತರ ಕಲಾಪ ಮುಂದುವರಿಯಿತು.

ನಿರ್ಲಕ್ಷ್ಯ ಸರಿಯಲ್ಲ:

Advertisement

ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಬಂದಾಗ ಉತ್ತರಿಸಲು ಸಚಿವ ಡಾ| ಸಿ. ಎನ್‌.ಅಶ್ವತ್ಥನಾರಾಯಣ ಸದನದಲ್ಲಿರಲಿಲ್ಲ. ಇದಕ್ಕೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್‌, ಸಚಿವರು ಇಂಥ ನಿರ್ಲಕ್ಷ್ಯ ತೋರಿಸುವುದು ಸರಿಯಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next