Advertisement

ಸರಕಾರಕ್ಕೆ ಸವಾಲು: ಬಿಬಿಎಂಪಿ ಚುನಾವಣೆ ನಡೆಸಲು ಗಡುವು ನಿಗದಿಪಡಿಸಿದ ಹೈಕೋರ್ಟ್

03:15 PM Sep 30, 2022 | Team Udayavani |

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಒಬಿಸಿ ಮತ್ತು ಮಹಿಳಾ ಮೀಸಲಾತಿಗಾಗಿ ಸರಕಾರದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದ್ದು, ನವೆಂಬರ್ 30 ರೊಳಗೆ ಹೊಸ ಅಧಿಸೂಚನೆಯನ್ನು ಹೊರಡಿಸಲು ಮತ್ತು ಡಿಸೆಂಬರ್ 31 ರೊಳಗೆ ಚುನಾವಣೆಯನ್ನು ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.

Advertisement

ವಿವಿಧ ವರ್ಗಗಳ ಅಡಿಯಲ್ಲಿ 243 ವಾರ್ಡ್‌ಗಳಿಗೆ ನಿಗದಿಪಡಿಸಿರುವ ಮೀಸಲಾತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಲೇವಾರಿ ಸಂದರ್ಭದಲ್ಲಿ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಪೀಠ, ನವೆಂಬರ್ 30 ರೊಳಗೆ ಮಹಿಳಾ ಮತ್ತು ಇತರ ಒಬಿಸಿ ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆಯನ್ನು ರೀಡೂ ಮಾಡಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಮಹಿಳೆಯ ವರ್ಗಕ್ಕೆ ಮೀಸಲಾತಿ ತರ್ಕಬದ್ಧವಾಗಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಮಹಿಳೆಯರಿಗೆ ಅವರ ಜನಸಂಖ್ಯೆಯ ಅವರೋಹಣ ಕ್ರಮದಲ್ಲಿ ವಾರ್ಡ್ ವಾರು ಮೀಸಲಾತಿಯನ್ನು ನಿಗದಿಪಡಿಸಲು ಸರಕಾರಕ್ಕೆ ನಿರ್ದೇಶನ ನೀಡಿದೆ.

ಒಬಿಸಿಗಳಿಗೆ ಮೀಸಲಾತಿಯ ಸಂದರ್ಭದಲ್ಲಿ, ಈ ವರ್ಗಕ್ಕೆ ಮೀಸಲಾತಿಗಾಗಿ ಶಿಫಾರಸುಗಳನ್ನು ಮಾಡಲು ರಚಿಸಲಾದ ಆಯೋಗದ ಮುಂದೆ ಒಬಿಸಿ ಜನಸಂಖ್ಯೆಯ ಸರಿಯಾದ ಅಂಕಿ ಅಂಶಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಸರಕಾರಕ್ಕೆ ನಿರ್ದೇಶಿಸಿದೆ. ಆಯೋಗದಿಂದ ಪರಿಷ್ಕೃತ ವರದಿಯನ್ನು ಪಡೆದುಕೊಂಡ ನಂತರ ಸರಕಾರವು ಒಬಿಸಿಗೆ ಮೀಸಲಾತಿಯನ್ನು ನಿಗದಿಪಡಿಸಬೇಕಾಗುತ್ತದೆ.

ರಾಜ್ಯ ಚುನಾವಣಾ ಆಯೋಗ ಡಿಸೆಂಬರ್ 31 ರೊಳಗೆ ಚುನಾವಣೆಯನ್ನು ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next