Advertisement

ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ ಕರ್ನಾಟಕ

02:30 PM Feb 03, 2023 | Team Udayavani |

ಬೆಂಗಳೂರು: ಶ್ರೇಯಸ್ ಗೋಪಾಲ್ ಸೇರಿದಂತೆ ಪ್ರಮುಖ ಆಟಗಾರರ ನೆರವಿನಿಂದ ಕರ್ನಾಟಕ ರಾಜ್ಯ ತಂಡವು ಉತ್ತರಾಖಂಡ್ ವಿರುದ್ಧ ಗೆದ್ದು ರಣಜಿ ಟ್ರೋಫಿ ಸೆಮಿ ಫೈನಲ್ ಪ್ರವೇಶಿಸಿದೆ.

Advertisement

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು ಇನ್ನಿಂಗ್ಸ್ ಮತ್ತು 281 ರನ್ ಅಂತರದ ಗೆಲುವು ಸಾಧಿಸಿತು.

ಇದನ್ನೂ ಓದಿ:ಮಂಗಳೂರು ವಿಮಾನ ನಿಲ್ದಾಣ; 90 ಲಕ್ಷ ರೂ. ಮೌಲ್ಯದ ಚಿನ್ನ ವಶ; ಗುದ ನಾಳದಲ್ಲಿ ಸಾಗಾಟ!

ದ್ವಿತೀಯ ಇನ್ನಿಂಗ್ಸ್ ನಲ್ಲಿ 106 ರನ್ ಗೆ ಮೂರು ವಿಕೆಟ್ ಕಳೆದುಕೊಂಡಲ್ಲಿಂದ ಇಂದಿನ ದಿನದಾಟ ಆರಂಭಿಸಿದ ಉತ್ತರಾಖಂಡವು 209 ರನ್ ಗೆ ಆಲೌಟಾಯಿತು. ಸ್ವಪ್ನಿಲ್ ಸಿಂಗ್ 51 ರನ್ ಗಳಿಸಿದರೆ, ದಿಕ್ಷಾನ್ಶು ನೇಗಿ 29 ರನ್ ಮಾಡಿದರು. ಕರ್ನಾಟಕದ ಪರ ವಿಜಯ್ ಕುಮಾರ್ ವೈಶಾಖ್ ಮತ್ತು ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್ ಪಡೆದರೆ, ವಿದ್ವತ್ ಕಾವೇರಪ್ಪ ಮತ್ತು ಮುರಳೀಧರ ವೆಂಕಟೇಶ್ ತಲಾ ಎರಡು ವಿಕೆಟ್ ಕಿತ್ತರು.

ಮೊದಲ ಇನ್ನಿಂಗ್ಸ್ ನಲ್ಲಿ ಉತ್ತರಾಖಂಡ ತಂಡವು 116 ರನ್ ಗಳಿಸಿತ್ತು. ಸಣ್ಣ ಮೊತ್ತಕ್ಕೆ ಪ್ರತಿಯಾಗಿ ಕರ್ನಾಟಕವು 606 ರನ್ ಗಳಿಸಿತ್ತು. ಶ್ರೇಯಸ್ ಗೋಪಾಲ್ ಅಜೇಯ 161 ರನ್ ಮಾಡಿದ್ದರೆ, ಸಮರ್ಥ್, ಮಯಾಂಕ್, ಪಡಿಕ್ಕಲ್ ಅರ್ಧಶತಕ ಬಾರಿಸಿದ್ದರು.

Advertisement

ಶ್ರೇಯಸ್ ಗೋಪಾಲ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next