Advertisement

ರಾಜ್ಯದಲ್ಲಿಂದು 851 ಜನರಲ್ಲಿ ಕೋವಿಡ್ ಸೋಂಕು ದೃಢ : 790 ಸೋಂಕಿತರು ಗುಣಮುಖ

07:22 PM Sep 07, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 851 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗಲಿದ್ದು, 15 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.7) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 790 ಜನ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.71% ರಷ್ಟು ಇದೆ. 17,432 ಸಕ್ರಿಯ ಪ್ರಕರಣಗಳು ಇವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 248 ಜನರಿಗೆ ಸೋಂಕು ತಗುಲಿದ್ದು, 3 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 362 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7063 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಕೋವಿಡ್ ಅಂಕಿ ಅಂಶಗಳು :

ಬಾಗಲಕೋಟೆ : 0, ಬಳ್ಳಾರಿ: 3, ಬೆಳಗಾವಿ : 8, ಬೆಂಗಳೂರು ಗ್ರಾಮಾಂತರ : 8, ಬೀದರ್ : 1, ಚಾಮರಾಜನಗರ : 7, ಚಿಕ್ಕಬಳ್ಳಾಪುರ: 2 , ಚಿಕ್ಕಮಗಳೂರು : 49 , ಚಿತ್ರದುರ್ಗ: 4, ದಕ್ಷಿಣ ಕನ್ನಡ :227 , ದಾವಣಗೆರೆ: 9, ಧಾರವಾಡ : 0 , ಗದಗ :0 , ಹಾಸನ: 25 , ಹಾವೇರಿ: 1 ,ಕಲಬುರಗಿ : 3 , ಕೊಡಗು: 31 , ಕೋಲಾರ : 10 , ಕೊಪ್ಪಳ : 0 , ಮಂಡ್ಯ: 12, ಮೈಸೂರು : 53 , ರಾಯಚೂರು ; 2 , ರಾಮನಗರ : 1 , ಶಿವಮೊಗ್ಗ: 20 , ತುಮಕೂರು : 44 , ಉಡುಪಿ ; 74 , ಉತ್ತರ ಕನ್ನಡ : 8 , ವಿಜಯಪುರ :0 , ಯಾದಗಿರಿ: 1

Advertisement
Advertisement

Udayavani is now on Telegram. Click here to join our channel and stay updated with the latest news.

Next