Advertisement

ಆರು ತಿಂಗಳಲ್ಲಿ ನಾಲ್ವರು ಸಿಎಂ ಬದಲಾವಣೆ |ಬಿಜೆಪಿ ‘ರಾಜೀನಾಮೆ ಪರ್ವ’ಕ್ಕೆ ಕಾಂಗ್ರೆಸ್ ಟೀಕೆ

07:26 PM Sep 11, 2021 | Team Udayavani |

ಬೆಂಗಳೂರು: ಇಂದು ನಡೆದ ದಿಢೀರ್ ಬೆಳವಣೆಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾಣಿಯವರು ರಾಜೀನಾಮೆ ನೀಡಿದರು. ಗುಜರಾತ್ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಮುಖ್ಯಮಂತ್ರಿ ಬದಲಾವಣೆ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Advertisement

ಕೇವಲ ಗುಜರಾತ್ ಮಾತ್ರವಲ್ಲದೆ ಕಳೆದ ಆರು ತಿಂಗಳಲ್ಲಿ ಮೂರು ರಾಜ್ಯದಲ್ಲಿ ನಾಲ್ವರು ಸಿಎಂಗಳನ್ನು ಬಿಜಿಪಿ ಹೈಕಮಾಂಡ್ ಬದಲಾವಣೆ ಮಾಡಿದೆ. ಮೊದಲಿಗೆ ಉತ್ತರಾಖಂಡದಲ್ಲಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನಂತರ ಸಿಎಂ ಆದ ತೀರ್ಥ್ ಸಿಂಗ್ ರಾವತ್ ನಾಲ್ಕೇ ತಿಂಗಳಿಗೆ ರಾಜೀನಾಮೆ ನೀಡಿದರು, ಸದ್ಯ ಪುಷ್ಕರ ಸಿಂಗ್ ಧಾಮಿನಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬಸವರಾಜ್ ಬೊಮ್ಮಾಯಿ ಅವರಿಗೆ ಅಧಿಕಾರ ನೀಡಿದರು. ಇದೀಗ ಗುಜರಾತ್ ನಲ್ಲಿಯೂ ಇದೇ ಸೂತ್ರ ಅನುಸರಿಸಿದ್ದು, ರೂಪಾಣಿಗೆ ಕೊಕ್ ಕೊಟ್ಟು ಮತ್ತೊಬ್ಬರಿಗೆ ಅಧಿಕಾರದ ಹೊಣೆ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.

ಇನ್ನು ಬಿಜೆಪಿಯ ಈ ಮುಖ್ಯಮಂತ್ರಿ ಬದಲಾವಣೆ ಪರ್ವವನ್ನು ಕರ್ನಾಟಕ ರಾಜ್ಯ ಕಾಂಗ್ರೆಸ್ ಟೀಕಿಸಿದೆ. ಇಂದು (ಸೆ.11) ಸಂಜೆ ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಉತ್ತರಖಾಂಡದಲ್ಲಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನಂತರ ಸಿಎಂ ಆದ ತೀರ್ಥ್ ಸಿಂಗ್ ರಾವತ್ ನಾಲ್ಕೇ ತಿಂಗಳಿಗೆ ರಾಜೀನಾಮೆ ನೀಡಿದರು. ಬಿ.ಎಸ್.ಯಡಿಯೂರಪ್ಪನವರು ಕಣ್ಣೀರಿಡುತ್ತಾ ರಾಜೀನಾಮೆ ನೀಡಿದರು. ಇವರ ರಾಜೀನಾಮೆಗೆ ಕಾರಣ ಇನ್ನೂ ನಿಗೂಢ. ಈಗ ಗುಜರಾತ್ ಸಿಎಂ ವಿಜಯ್ ರೂಪಾನಿ ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಈ ರಾಜಿನಾಮೆಗಳು ದೇಶಾದ್ಯಂತ ಬಿಜೆಪಿಗೆ ಜನವಿರೋಧ ಎದುರಾಗಿರುವ ದ್ಯೋತಕ ಎಂದು ಟಾಂಗ್ ಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next