Advertisement

31ರಂದು ಕರ್ನಾಟಕ ಬಂದ್ ಶತಸಿದ್ದ: ಗುಡುಗಿದ ವಾಟಾಳ್ ನಾಗರಾಜ್

04:21 PM Dec 29, 2021 | Team Udayavani |

ಬೆಳಗಾವಿ : ಡಿ.31ರಂದು ಕರ್ನಾಟಕ ಬಂದ್‌ಗೆ ಗೊಂದಲ ವಿಚಾರಕ್ಕೆ ಸಂಬಂಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಬುಧವಾರ ಹೇಳಿಕೆ ನೀಡಿದ್ದು, 31ರಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್ ಶತ ಸಿದ್ದ ಎಂದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ದಿನಗಳ ಹಿಂದೆ ನಾವು ಬಂದ್‌ಗೆ ಕರೆ ಕೊಟ್ಟಿದ್ದೇವೆ. ನಮ್ಮ ಹೋರಾಟ ಎಂಇಎಸ್ ನಿಷೇಧ ಮಾಡಲು, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದವರ ವಿರುದ್ಧ. ಬೆಳಗಾವಿಯ ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ಕೊಟ್ಟಿದ್ದಾರೆ. ಈಗಾಗಲೇ ಬಂದ್‌ಗೆ ಕರೆ ಕೊಟ್ಟಿದ್ದೇವೆ ಯಾವುದೇ ಬದಲಾವಣೆ ಇಲ್ಲ ಎಂದರು.

ನಾನು ಬೆಳಗಾವಿಯಲ್ಲಿದ್ದೇನೆ, ಪ್ರವೀಣ್ ಶೆಟ್ಟಿ ಅವರ ಪತ್ರ ಬಂದಿರೋದು ಗೊತ್ತಿಲ್ಲ.ಅವರು ಹೇಳಿಕೆ ಕೊಡಲು ಸ್ವತಂತ್ರರು ಅದರ ಬಗ್ಗೆ ಚಿಂತೆ ಇಲ್ಲ ಎಂದರು.

ನಾಳೆ ಸಭೆ ಸೇರಿ ಚರ್ಚೆ ಮಾಡುತ್ತೇವೆ ಎಂದು ಸಾರಾ ಗೋವಿಂದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸೂರ್ಯ ಈಕಡೆ ಬರಲಿ ಚಂದ್ರ ಆ ಕಡೆ ಹೋಗಲಿ ಬಂದ್ ಶತಸಿದ್ಧ.ಇಡೀ ದೇಶದಲ್ಲಿ ಎಲ್ಲಾ ಹೋರಾಟಗಳು ಒಂದಲ್ಲಾ ಒಂದು ರೀತಿಯಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತವೆ. ಇದೆಲ್ಲವನ್ನೂ ದೊಡ್ಡದು ಮಾಡಲು ಆಗುವುದಿಲ್ಲಾ. ಎಂಇಎಸ್ ನಿಷೇಧ ಆದರೆ ಗಡಿಯಲ್ಲಿ ಪುಂಡಾಟಿಕೆ‌ ನಿಲ್ಲುತ್ತದೆ. ನಾನಂತೂ ನನ್ನ ಉಸಿರಿರುವವರೆಗೂ ಎಂಇಎಸ್ ನಿಷೇಧಕ್ಕೆ ಹೋರಾಟ ಮಾಡುತ್ತೇನೆ. 31ರಂದು ಬಂದ್ ಯಾವ ಯಾವ ರೀತಿ ಆಗುತ್ತದೆ ಎನ್ನುವುದು ಕನ್ನಡಿಗರಿಗೆ ಬಿಟ್ಟದ್ದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next