Advertisement

ಫೆ.18; ಕರ್ಣಾಟಕ ಬ್ಯಾಂಕ್ 99ನೇ ಸಂಸ್ಥಾಪಕರ ದಿನಾಚರಣೆ-ಉಪನ್ಯಾಸ, ಶಾಸ್ತ್ರೀಯ ಸಂಗೀತ ಕಛೇರಿ

06:37 PM Feb 17, 2023 | Team Udayavani |

ಮಂಗಳೂರು: ಕರ್ಣಾಟಕ ಬ್ಯಾಂಕ್ ನ 99ನೇ ಸಂಸ್ಥಾಪಕರ ದಿನಾಚರಣೆ ಮತ್ತು ಶತಮಾನೋತ್ಸವ ವರ್ಷದ ಕಾರ್ಯಕ್ರಮದ ಶುಭಾರಂಭದ ಹಿನ್ನೆಲೆಯಲ್ಲಿ ಶನಿವಾರ (ಫೆ.18) ಬೆಂಗಳೂರು ಐಐಐಟಿ ಮಾಜಿ ನಿರ್ದೇಶಕ ಪ್ರೊ.ಎಸ್.ಸಡಗೋಪನ್ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

ಶನಿವಾರ ಸಂಜೆ 4ಗಂಟೆಗೆ ಮಂಗಳೂರು ಕಂಕನಾಡಿ ಮಹಾವೀರ ವೃತ್ತ ಸಮೀಪದ ಪ್ರಧಾನ ಕಚೇರಿ ಕಟ್ಟಡದ ಕರ್ಣಾಟಕ ಬ್ಯಾಂಕ್ ಅಡಿಟೋರಿಯಂನ 4ನೇ ಮಹಡಿಯಲ್ಲಿ ಉಪನ್ಯಾಸ ಕಾರ್ಯಕ್ರಮ ನೆರವೇರಲಿದೆ.

ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸ ಕಾರ್ಯಕ್ರಮದ ನಂತರ ಕರ್ಣಾಟಕ ಶಾಸ್ತ್ರೀಯ ಸಂಗೀತ ಕಛೇರಿ-ಸ್ಟ್ರಿಂಗ್ಸ್ ಅಟ್ಯಾಚ್ಡ್ ಕಾರ್ಯಕ್ರಮ ನಡೆಯಲಿದೆ.

ಸಂಗೀತ ಕಛೇರಿಯಲ್ಲಿ ಕಲಾವಿದರಾದ ವಯೋಲಿನ್ ವಿದ್ವಾನ್ ಆರ್ ಕುಮರೇಶ್, ವೀಣಾ-ವಿದುಷಿ ಡಾ.ಜಯಂತಿ ಕುಮರೇಶ್, ಮೃದಂಗ-ವಿದ್ವಾನ್ ಕೆ.ಯು.ಜಯಚಂದ್ರ ರಾವ್ ಹಾಗೂ ತಬಲ-ಮೋರ್ಚಿಂಗ್ ವಿದ್ವಾನ್ ಪ್ರಮಥ್ ಕಿರಣ್ ಪಾಲ್ಗೊಳ್ಳಲಿದ್ದಾರೆ ಎಂದು ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next