Advertisement

ಕರ್ನಾಟಕ ಬಂದ್: ಹಾವೇರಿಯಲ್ಲಿ ರೈತ ಸಂಘಟನೆಗಳಿಂದ ವಿನೂತನ ರೀತಿಯ ಪ್ರತಿಭಟನೆ

12:24 PM Sep 28, 2020 | keerthan |

ಹಾವೇರಿ: ರೈತಪರ ಸಂಘಟನೆಗಳಿಂದ‌ ಇಂದು ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆ ಹಾವೇರಿಯಲ್ಲಿ ರೈತಪರ ಸಂಘಟನೆಗಳು ವಿನೂತನ ರೀತಿಯ  ಪ್ರತಿಭಟನೆ ನಡೆಸಿದವು.

Advertisement

ಹಾವೇರಿಯ ಸಿದ್ದಪ್ಪ ಸರ್ಕಲ್‌ನಲ್ಲಿ ಅರೆಬೆತ್ತಲಾಗಿ, ಕುತ್ತಿಗೆಗೆ ನೇಣು ಕುಣಿಕೆ ಹಾಕಿಕೊಂಡು ರೈತರ ಪ್ರತಿಭಟನೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಬಾಯಿ ಬಾಯಿ ಬಡ್ಕೊಂಡು, ಹೊಯ್ಕಳ್ಳೋ ಮೂಲಕ ಧರಣಿ ನಡೆಸಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲಿ ಬೆಂಬಲ: ಬಸ್ ನಿಲ್ದಾಣಕ್ಕೆ ಮುತ್ತಿಗೆ

ರಾಜ್ಯ ಬಂದ್ ಹಿನ್ನೆಲೆ ತೆರೆದಿರುವ ಅಂಗಡಿ, ಹೋಟೆಲ್ ಗಳನ್ನು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಲು ಪ್ರತಿಭಟನಾಕಾರರು ಮುಂದಾಗಿದ್ದು, ಹೀಗೆ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next