ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅರ್ಹ ಮತದಾರರು ಮತದಾನ ಮಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಮತ್ತು ಮತದಾನದ ಕುರಿತು ನಮ್ಮ ಓದುಗರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಸುಮಾರು ಒಂದು ತಿಂಗಳಿನಿಂದ ನಾವೊಂದು
ಅಭಿಯಾನವನ್ನು ಪ್ರಾರಂಭಿಸಿದ್ದೆವು. ಅದುವೇ,
‘ನಾನು ಓಟ್ ಮಾಡ್ತೇನೆ.. ನೀವೂ ಓಟ್ ಮಾಡಿ..’ ಈ ನಮ್ಮ ಅಭಿಯಾನದಲ್ಲಿ ಕರ್ನಾಟಕದ ಸಾಹಿತ್ಯವಲಯದ ಧಿಗ್ಗಜರು, ಸ್ಯಾಂಡಲ್ ವುಡ್ ಮತ್ತು ತುಳು ಚಿತ್ರರಂಗದ ನಟ – ನಟಿಯರು ಹಾಗೂ ರಂಗತಂಡ ಸದಸ್ಯರು ಮತದಾನದ ಜಾಗೃತಿಯನ್ನು ನೀಡುವ ಸಂದೇಶಗಳನ್ನು ನಮ್ಮ
Udayavani Online ಮಾಧ್ಯಮದ ಮೂಲಕ ನೀಡಿದ್ದರು.
ಈ ಅಭಿಯಾನದ ಕೊನೆಯ ಹಂತವಾಗಿ ನಾವಿಂದು,
ಮಣಿಪಾಲ ಸಮೂಹ ಸಂಸ್ಥೆಯ ಉದ್ಯೋಗಿಗಳು ನಮ್ಮ
ನಾಡಿನ ವಿವಿಧ ಜನಸಮುದಾಯದವರ ಆಡುಭಾಷೆಯಲ್ಲಿ ಮತದಾನಕ್ಕೆ ಕರೆ ನೀಡುವ ಒಂದು ವಿಭಿನ್ನ ಪ್ರಯತ್ನದ ವಿಡಿಯೋವನ್ನು ತಯಾರಿಸಿದ್ದೇವೆ. ಕರುನಾಡಿನ ಎಲ್ಲಾ ವರ್ಗದ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕೆಂಬ ಕಳಕಳಿಯಿಂದ ನಾವು ಈ ಪ್ರಯತ್ನವನ್ನು ಮಾಡಿದ್ದೇವೆ. ಮತದಾನದ ಈ ದಿನ ನೀವೆಲ್ಲರೂ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿನ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದಲ್ಲಿ ನಮ್ಮ ಈ ಶ್ರಮ ಸಾರ್ಥಕವಾದಂತೆ.
ಹಾಗಾದರೆ ಇವತ್ತು ನೀವೆಲ್ಲರೂ ಓಟ್ ಮಾಡುತ್ತೀರಲ್ಲಾ…?
ನಮ್ಮ ಈ ಆಭಿಯಾನದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಮಹನೀಯರೆಲ್ಲರಿಗೂ ನಮ್ಮ ಧನ್ಯವಾದಗಳು.
–Team Online