Advertisement

ಹೆಬ್ರಿ: 8ನೇ ತರಗತಿಯ ವಿದ್ಯಾರ್ಥಿ ನೇಣಿಗೆ ಶರಣು

12:27 PM Jan 17, 2022 | Team Udayavani |

ಹೆಬ್ರಿ: 8ನೇ ತರಗತಿಯ ವಿದ್ಯಾರ್ಥಿ ಮನೆಯ ಸ್ನಾನಗೃಹದಲ್ಲಿ ನೇಣಿಗೆ ಶರಣಾದ ಘಟನೆ ಜ.16ರಂದು ನಡೆದಿದೆ.

Advertisement

ಕೆರೆಬೆಟ್ಟು ಗ್ರಾಮದ ಮಾವಿ ನಕಟ್ಟೆಮನೆ ನಿವಾಸಿ ಮಮತಾ ಶೆಟ್ಟಿ ಹಾಗೂ ಸತೀಶ್‌ ಅವರ ಪುತ್ರ ಅನ್ವಿತ್‌ (14) ಆತ್ಮಹತ್ಯೆ ಮಾಡಿಕೊಂಡವ.

ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆ ಯ ವಿದ್ಯಾರ್ಥಿ ಯಾಗಿದ್ದ ಅನ್ವಿತ್‌ ಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಹಿನ್ನಲೆಯಲ್ಲಿ ಸರಿಯಾಗಿ ಕಲಿಯುವಂತೆ ತಾಯಿ ಬುದ್ಧಿಮಾತು ಹೇಳುತ್ತಿದ್ದರು. ಇದೇ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next