Advertisement

Mangalore: ಕರಿಮಣಿ ಸರ, ಮೊಬೈಲ್‌ ಕಳವು

08:38 PM May 23, 2024 | Team Udayavani |

ಮಂಗಳೂರು: ಪಾಂಡೇಶ್ವರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಚ್‌ಮ್ಯಾನ್‌ ರೂಮ್‌ನಲ್ಲಿ ಇರಿಸಲಾಗಿದ್ದ 84 ಸಾವಿರ ರೂ. ಮೌಲ್ಯದ 13 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಮತ್ತು 950 ರೂ. ಮೌಲ್ಯದ ಕೀ ಪ್ಯಾಡ್‌ ಮೊಬೈಲ್‌ ಕಳವಾಗಿದೆ ಎಂದು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮೇ 17ರಂದು ರಾತ್ರಿ 11ಗಂಟೆಯಿಂದ ಮೇ 18ರ ಬೆಳಗ್ಗೆ 6.30 ಅವಧಿಯಲ್ಲಿ ಕಳ್ಳತನ ನಡೆದಿದೆ. ರೂಮ್‌ನ ಟೇಬಲ್‌ ಮೇಲೆ ಇಟ್ಟಿದ್ದ ತಾಯಿಯ ಚಿನ್ನದ ಕರಿಮಣಿ ಸರ ಮತ್ತು ತನ್ನ ಮೊಬೈಲ್‌ ಫೋನ್‌ನ್ನು ಯಾರೋ ಕಿಟಕಿ ಮೂಲಕ ಆಥವಾ ತೆರೆದ ಬಾಗಿಲಿನ ಮೂಲಕ ಒಳ ಬಂದು ಕಳವು ಮಾಡಿದ್ದಾರೆ ಎಂದು ಮಾಂತೇಶ್‌ ಗೌಡ ಅವರು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next