Advertisement

ಪಾಠದೊಂದಿಗೆ ಕೌಶಲ್ಯ ಬೆಳೆಸಿಕೊಳ್ಳಿ

11:15 AM Feb 01, 2019 | |

ಕಾರಟಗಿ: ಬದಲಾಗುತ್ತಿರುವ ಪಠ್ಯಕ್ರಮ, ಶಿಕ್ಷಣ ಪದ್ಧತಿಗಳು, ಬೋಧನಾ ವಿಧಾನ ಹಾಗೂ ವೃತ್ತಿ ಕೌಶಲ್ಯಗಳು ಬೆಳೆಸಿಕೊಳ್ಳಲು ಆಗಾಗ ಇಲಾಖೆ ಹಮ್ಮಿಕೊಳ್ಳುವ ಸಮಾಲೋಚನಾ ಸಭೆಗಳು ತರಬೇತಿಗಳು ಅತ್ಯವಶ್ಯಕವಾಗಿವೆ ಎಂದು ಗಂಗಾವತಿ-ಕಾರಟಗಿ ವಲಯ ಸಂಪನ್ಮೂಲ ವ್ಯಕ್ತಿ (ಬಿಆರ್‌ಸಿ) ಯಮನೂರಪ್ಪ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ನಗರದ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ ಪಶ್ಚಿಮ ಸಮೂಹ ಸಂಪನ್ಮೂಲ ಕೇಂದ್ರದ 1 ದಿನದ 4ನೇ ಅಗತ್ಯತೆ ಆಧಾರಿತ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ತಾಂತ್ರಿಕವಾಗಿ ಪ್ರಾಯೋಗಿಕವಾಗಿ ಹಾಗೂ ಚಟುವಟಿಕೆಗಳ ಆಧಾರಿತ ಬೋಧನೆಯಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರು ಉತ್ತಮ ಬೋಧನೆ ಅಳವಡಿಸಿಕೊಂಡು ಗುಣಾತ್ಮಕ ಶಿಕ್ಷಣ ನೀಡುವಂತೆ ಮನವಿ ಮಾಡಿದರು. ನಂತರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ತಿಮ್ಮಣ್ಣ ನಾಯಕ ಸಮಾಲೋಚನೆ ಸಭೆಯ ರೂಪುರೇಷೆಗಳು ಇಲಾಖಾ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ರಾಮಣ್ಣ ಹಳ್ಳಿಕೇರಿ ಶಿಕ್ಷಕರು ಚಟುವಟಿಕೆಗಳ ಮೂಲಕ ಗಣಿತ ಕಿಟ್ ಬಳಸುವ ವಿಧಾನವನ್ನು ತಿಳಿಸಿದರು.

ಸಮಾಲೋಚನಾ ಸಭೆಯಲ್ಲಿ ಶಿಕ್ಷಕರಿಗೆ ತುಂಬಾ ಉಪಯುಕ್ತ ವಾಗಿದ್ದು, ತರಗತಿಯಲ್ಲಿನ ಕ್ಲಿಷ್ಟಕರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಯಿತು. ಶಾಲಾ ಮುಖ್ಯೊಪಾಧ್ಯಾಯರಾದ ಸೋಮಪ್ಪ, ಸಹ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ಮಂಜುನಾಥ ಬಾಳೆಕುಂದ್ರಿ, ತನ್ವೀರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next