Advertisement

ಬಾಲಿವುಡ್‌ ನಲ್ಲಿ ಇದುವರೆಗೆ ಪ್ರತಿಭಾವಂತ ಕಲಾವಿದರು ಸಿಕ್ಕಿಲ್ಲ: ಕರಣ್‌ ಜೋಹರ್

12:16 PM Sep 10, 2022 | Team Udayavani |

ಮುಂಬಯಿ: ಬಾಲಿವುಡ್‌ ನ ಸ್ಟಾರ್‌ ನಿರ್ಮಾಪಕ ಕರಣ್‌ ಜೋಹರ್‌ ಒಂದಲ್ಲ, ಒಂದು ವಿಷಯದಲ್ಲಿ ಟ್ರೆಂಡ್‌ ನಲ್ಲಿರುತ್ತಾರೆ. ಇತ್ತೀಚಿಗೆ ಅವರ ʼಕಾಫಿ ವಿತ್‌ ಕರಣ್‌ʼ ಕಾರ್ಯಕ್ರಮದ ಮೂಲಕ  ಸುದ್ದಿಯಲ್ಲಿದ್ದಾರೆ. ಸ್ಟಾರ್‌ ನಟ- ನಟಿಯರ ಜೀವನದ ಬಗೆಗಿನ ಸ್ವಾರಸ್ಯಕರ ಹಾಗೂ ವೈಯಕ್ತಿಕ ವಿಷಯಗಳನ್ನು ಕೇಳುವ ʼಕಾಫಿ ವಿತ್‌ ಕರಣ್‌ ಸೀಸನ್‌ -7ʼ ಪ್ರಸಾರವಾಗುತ್ತಿದೆ. ಅಮೆಜಾನ್‌ ಮಿನಿ ಟಿವಿಯ ಜನಪ್ರಿಯ ವೀಕೆಂಡ್‌  ಕಾಮಿಡಿ ಶೋ ʼಕೇಸ್‌ ತೋ ಬಂತಾ ಹೈʼ ( Case Toh Banta Hai) ಕಾರ್ಯಕ್ರಮದಲ್ಲಿ ಕರಣ್ ಆಡಿದ ಮಾತು ಈಗ ವೈರಲ್‌ ಆಗಿದೆ.

Advertisement

ಕಾರ್ಯಕ್ರಮದಲ್ಲಿ ಮೂರು ವಕೀಲರು ಇರುತ್ತಾರೆ. ಅದರಲ್ಲಿ ನಟ ರಿತೇಶ್‌ ದೇಶ್ಮುಖ್‌ ಕೂಡ ಒಬ್ಬರು.  ರಿತೇಶ್‌ ದೇಶ್ಮುಕ್‌ “ ನೀವು ಚಿತ್ರಕ್ಕಾಗಿ ನಟ – ನಟಿಯರನ್ನು ಆಯ್ಕೆ ಮಾಡಿಕೊಳ್ಳುವಾಗ ಅವರ ಅಂದವನ್ನು ನೋಡುತ್ತೀರಾ ಅಥವಾ ಅವರ ನೋಟವನ್ನು ನೋಡುತ್ತೀರಾ?‌” ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕೂಲ್‌ ಆಗಿ ಪ್ರತಿಕ್ರಿಯಿಸಿದ ಕರಣ್‌ “ನಾನು ಮನರಂಜನೆಯ ದೃಷ್ಟಿಯಿಂದ ಆಯ್ಕೆ ಮಾಡುತೇನೆ, ಕೆಲವೊಮ್ಮೆ ಪ್ರತಿಭೆಯನ್ನು ಹುಡುಕಲು ಪ್ರಯತ್ನಿಸುತ್ತೇನೆ ಆದರೆ, ಪ್ರತಿಭೆ ಇದುವರೆಗ ನನಗೆ ಸಿಕ್ಕಿಲ್ಲ” ಎಂದಿದ್ದಾರೆ.

ಬಾಲಿವುಡ್‌ ಗೆ ಆಲಿಯಾ ಭಟ್‌, ಅನನ್ಯಾ ಪಾಂಡೆ ಸೇರಿದಂತೆ ಅನೇಕ ಹೊಸ ಪ್ರತಿಭೆಗಳನ್ನು ಪರಿಚಯಿಸಿದ ಕರಣ್ ಕಾರ್ಯಕ್ರಮದಲ್ಲಿ ಕೇಳಲಾದ ಪ್ರಶ್ನೆವೊಂದಕ್ಕೆ ಈ ರೀತಿ ಉತ್ತರಿಸಿದ್ದು, ಈಗ ಚರ್ಚೆಗೆ ಗ್ರಾಸವಾಗಿದೆ.

ಕರಣ್‌ ಜೋಹರ್‌ ಸದ್ಯ ನಿರ್ದೇಶನಕ್ಕೆ ಮತ್ತೆ ಮರಳಿದ್ದಾರೆ. ಅವರ ʼರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿʼ ಶೂಟಿಂಗ್‌ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ರಣ್ವೀರ್‌ ಸಿಂಗ್‌, ಆಲಿಯಾ ಭಟ್‌, ಧರ್ಮೇಂದ್ರ, ಜಯಾ ಬಚ್ಚನ್‌, ಶಭಾನ ಆಜ್ಮಿ ಮುಂತಾದವರು ಬಣ್ಣ ಹಚ್ಚಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next