Advertisement

ನನ್ನ ಬಗ್ಗೆ ಮಾತಾಡುವಾಗ ಬಹಳ ಎಚ್ಚರದಿಂದಿರಿ…ಪಾಟೀಲ್ ಗೆ ಕಾರಜೋಳ ಎಚ್ಚರಿಕೆ

12:33 PM Jan 10, 2022 | Raghavendra Bhat |

ಬೆಂಗಳೂರು:ಹಾಲಿ ಹಾಗೂ ಮಾಜಿ ಜಲಸಂಪನ್ಮೂಲ ಸಚಿವರ ಮಧ್ಯೆ ವಾಗ್ವಾದ ತಾರಕಕ್ಕೆ ಏರಿದ್ದು, ಒಬ್ಬ ಸಾಮಾನ್ಯ ಮನುಷ್ಯ ಸಚಿವನಾಗಿದ್ದಕ್ಕೆ ಎಂಬಿ ಪಾಟೀಲ್ ಅವರಿಗೆ ಹೊಟ್ಟೆ ಉರಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

Advertisement

ಇದನ್ನೂ ಓದಿ:ಇಂಧನ ಬೆಲೆ ಏರಿಕೆ: ಕಝಕಿಸ್ತಾನ್ ನಲ್ಲಿ ಭುಗಿಲೆದ್ದ ಹಿಂಸಾಚಾರ, ಲೂಟಿ; 160 ಮಂದಿ ಸಾವು

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು “ಗೋವಿಂದ ಕಾರಜೋಳ ನಾಲಾಯಕ್” ಎಂದ ಮಾಜಿ ಸಚಿವ ಎಂಬಿ ಪಾಟಿಲ್ ಹೇಳಿದ್ದಾರೆ. ಮಾತಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದ್ದಾರೆ.

ನಾನು ನಿಮ್ಮ ಬಬಲೇಶ್ವರ ಕ್ಷೇತ್ರದ ಮೂಲ ನಿವಾಸಿಯಾಗಿದ್ದು, ನನ್ನ ಬಗ್ಗೆ ಮಾತಾಡುವಾಗ ಬಹಳ ಎಚ್ಚರದಿಂದಿರಿ. ಬಹುಷಃ ಅವರಿಗೆ ನನ್ನ ಮೇಲೆ ಏನೋ ಹೊಟ್ಟೆ ಉರಿ ಇದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಅವರು ಒಬ್ಬರೇ ಜಲಸಂಪನ್ಮೂಲ ಸಚಿವರು ಆಗಿದ್ದರು ಅನಿಸುತ್ತದೆ. ಈಗ ನಾನೂ ಜಲಸಂಪ‌ನ್ಮೂಲ ಸಚಿವನಾಗಿದ್ದೇನೆ ಎಂದು ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next