Advertisement

Kapu ಕಾರು – ಬೈಕ್‌ ಢಿಕ್ಕಿ: ಮೂವರಿಗೆ ಗಾಯ

11:12 PM Jan 01, 2024 | Team Udayavani |

ಕಾಪು: ಕಾರು ಮತ್ತು ಬೈಕ್‌ ಢಿಕ್ಕಿ ಹೊಡೆದು ಬೈಕ್‌ ಸವಾರ ಸಹಿತ ಮೂವರು ಗಾಯಗೊಂಡ ಘಟನೆ ರವಿವಾರ ರಾತ್ರಿ ಕಟಪಾಡಿಯಲ್ಲಿ ನಡೆದಿದೆ.

Advertisement

ಕೇರಳದಿಂದ ಮಂಗಳೂರಿಗೆ ಬಂದು, ಅಲ್ಲಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರಿಗೆ ಕಟಪಾಡಿ ಜಂಕ್ಷನ್‌ ಬಳಿ ಮಟ್ಟು ಕಡೆಯಿಂದ ಬಂದ ಬೈಕ್‌ ಢಿಕ್ಕಿ ಹೊಡೆಯಿತು. ಬೈಕ್‌ ಸವಾರ ಪ್ರವೀಣ್‌ ಕೃಷ್ಣ ದೇವಾಡಿಗ ಬೈಕ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡರು. ಕಾರಿನಲ್ಲಿದ್ದ ಅಭಿಜಿತ್‌ ಮತ್ತು ಪೃಥ್ವಿರಾಜ್ ನಂಬಿಯಾರ್‌ ಅವರಿಗೂ ಗಾಯಗಳಾಗಿವೆ.

ಗಾಯಾಳುಗಳನ್ನು ಕಾರಿನಲ್ಲಿ ಆದಿಲ್‌ ಅವರು ರಿಕ್ಷಾದಲ್ಲಿ ಹಾಕಿಕೊಂಡು ಚಿಕಿತ್ಸೆ ಯ ಬಗ್ಗೆ ಉಡುಪಿಯ ಹೈಟೆಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಪ್ರವೀಣ್‌ ಕೃಷ್ಣ ದೇವಾಡಿಗ ಅವರನ್ನು ಆದರ್ಶ ಆಸ್ಪತ್ರೆಗೆ ಒಳರೋಗಿಯನ್ನಾಗಿ ದಾಖಲಿಸಲಾಗಿದೆ. ಕಾರು ಮತ್ತು ಬೈಕ್‌ಗಳೆರಡೂ ಜಖಂಗೊಂಡಿವೆ.ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next