Advertisement
ಘಟನೆ ಹಿನ್ನೆಲೆ:
Related Articles
Advertisement
ಆದರೆ ಸ್ಥಳೀಯರು ಇದನ್ನು ನಿರಾಕರಿಸಿದ್ದು, ನಮಗೆ ಯಾವುದೇ ನೋಟೀಸ್ ಬಂದಿಲ್ಲ. ಬುಲ್ಡೋಜರ್ ತಂದು ಹಲವು ಮನೆಗಳ ನೆಲಸಮ ಮಾಡಲಾಗಿದೆ. ಈ ವೇಳೆ ಗುಡಿಸಲು ಮನೆಗಳಿಗೆ ಬೆಂಕಿ ಕೊಟ್ಟಿದ್ದಾರೆ. ಮನೆಯ ಒಳಗಿದ್ದ ತಾಯಿ – ಮಗಳು ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಕೊಲೆ ಆರೋಪ:
ಮೃತ ಮಹಿಳೆಯ ಪುತ್ರ ಶಿವಂ ದೀಕ್ಷಿತ್, ಚಾಲಕ ಮೇಲಾಧಿಕಾರಿಗಳ ಆದೇಶದಂತೆ ಮನೆಯನ್ನು ಕೆಡವಿದ್ದಾನೆ. ಮನೆಯ ಒಳಗೆ ಜನ ಇದ್ದರೂ, ಬೆಂಕಿ ಹಚ್ಚಿದ್ದಾರೆ. ಎಲ್ಲರೂ ಓಡಿದ್ದಾರೆ ಯಾರೂ ಕೂಡ ನನ್ನ ತಾಯಿ – ಸಹೋದರಿಯನ್ನು ರಕ್ಷಿಸಿಲ್ಲ. ಬೇಕಂತಲೇ ಇದನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರು ತಾಯಿ – ಮಗಳು ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ಆದರೆ ಇದನ್ನು ತಳ್ಳಿ ಹಾಕಿರುವ ಗ್ರಾಮಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.
ಸದ್ಯ ರಾಜ್ಯ ಪೊಲೀಸರು 13 ಮಂದಿಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಬುಲ್ಡೋಜರ್ ಚಾಲಕ ದೀಪಕ್ ನನ್ನು ಬಂಧಿಸಲಾಗಿದ್ದು, ಬೆಂಕಿ ಹಚ್ಚಿದ ಕಂದಾಯ ಅಧಿಕಾರಿ ಅಶೋಕ್ ಸಿಂಗ್ ನನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.