Advertisement

ವಿಕಾಸ್ ದುಬೆ ಕ್ರಿಮಿನಲ್ ಕೆಲಸಕ್ಕೆ ಬೆಂಬಲ; ಪತ್ನಿ, ಪುತ್ರ ಕೂಡಾ ಪೊಲೀಸ್ ಬಲೆಗೆ

04:51 PM Jul 10, 2020 | Nagendra Trasi |

ಲಕ್ನೋ: ಪೊಲೀಸ್ ಎನ್ ಕೌಂಟರ್ ಗೆ ಬಲಿಯಾದ ನಟೋರಿಯಸ್ ಕ್ರಿಮಿನಲ್ ವಿಕಾಸ್ ದುಬೆ ಪತ್ನಿ, ಮಗ ಹಾಗೂ ಮನೆಕೆಲಸದ ವ್ಯಕ್ತಿಯನ್ನು ಉತ್ತರಪ್ರದೇಶ ಎಸ್ ಟಿಎಫ್ ಪಡೆ ಗುರುವಾರ ಸಂಜೆಯೇ ಬಂಧಿಸಿತ್ತು ಎಂಬ ವರದಿ ಹೊರಬಿದ್ದಿದೆ.

Advertisement

ಮಧ್ಯಪ್ರದೇಶದ ಉಜ್ಜೈನ್ ನಲ್ಲಿರುವ ಮಹಾಕಾಲ್ ದೇವಸ್ಥಾನದಲ್ಲಿ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯನ್ನು ಬಂಧಿಸಿದ ಬೆನ್ನಲ್ಲೇ ಕೃಷ್ಣಾ ನಗರ್ ನಿವಾಸದಲ್ಲಿದ್ದ ಪತ್ನಿ ರಿಚಾ ದುಬೆಯನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಲ್ಲದೇ ದುಬೆ ಪುತ್ರ ಹಾಗೂ ಮನೆಕೆಲಸದ ವ್ಯಕ್ತಿಯನ್ನು ಕೂಡಾ ಬಂಧಿಸಲಾಗಿತ್ತು. ದುಬೆಯನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳು ಕಾನ್ಪುರಕ್ಕೆ ತೆರಳಿದ್ದ ಸಂದರ್ಭದಲ್ಲಿ ನಡೆದ ಹತ್ಯೆ ಪ್ರಕರಣದ ರಿಚಾ ದುಬೆಯ ಪಾತ್ರದ ಬಗ್ಗೆ ಪೊಲೀಸರು ವಿಚಾರಣೆ ನಡೆಸಿರುವುದಾಗಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ವಿಕಾಸ್ ದುಬೆಯ ಎಲ್ಲಾ ಕಾನೂನು ಬಾಹಿರ ಕೃತ್ಯಗಳಿಗೆ ಪತ್ನಿ ಬೆಂಬಲ ನೀಡುತ್ತಿದ್ದಳು. ಅಷ್ಟೇ ಅಲ್ಲ ಜುಲೈ 3ರಂದು ಬಿಕ್ರು ಗ್ರಾಮದಲ್ಲಿ ಎಂಟು ಮಂದಿ ಪೊಲೀಸರು ಹತ್ಯೆಯಾದ ಘಟನೆಯ ಪಿತೂರಿಯಲ್ಲಿಯೂ ಈಕೆ ಶಾಮೀಲಾಗಿರುವುದಾಗಿ ವರದಿ ವಿವರಿಸಿದೆ.

Advertisement

ಕಾನ್ಪುರ್ ಘಟನೆ ನಂತರ ರಿಚಾ ದುಬೆ ನಾಪತ್ತೆಯಾಗಿದ್ದಳು. ಇದಕ್ಕೂ ಮುನ್ನ ಪೊಲೀಸರು ಕೃಷ್ಣಾ ನಗರ್ ನಿವಾಸಕ್ಕೆ ಪೊಲೀಸರು ಎರಡು ಬಾರಿ ಭೇಟಿ ನೀಡಿದ್ದರು, ಆದರೆ ರಿಚಾ ಆಗಲಿ, ಮಗನಾಗಲಿ ಇರಲಿಲ್ಲವಾಗಿತ್ತು. ಆದರೆ ದುಬೆ ಬಂಧನದ ನಂತರ ರಿಚಾ ಹಾಗೂ ಪುತ್ರನನ್ನು ಬಂಧಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಉಜ್ಜೈನ್ ನಿಂದ ಕಾನ್ಪುರಕ್ಕೆ ವಿಕಾಸ್ ದುಬೆಯನ್ನು ಕರೆತರುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ವಾಹನ ಪಲ್ಟಿಯಾಗಿದ್ದು, ಈ ವೇಳೆ ಪರಾರಿಯಾಗಲು ಯತ್ನಿಸಿದ್ದ ದುಬೆ ಎನ್ ಕೌಂಟರ್ ನಲ್ಲಿ ಹತ್ಯೆಗೀಡಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next