Advertisement

Kannur ಬಾಂಬ್‌ ಸ್ಫೋಟ ಹೆಚ್ಚಳ: ಅಸೆಂಬ್ಲಿಯಲ್ಲಿ ಒಪ್ಪಿಕೊಂಡ ಕೇರಳ ಮುಖ್ಯಮಂತ್ರಿ

11:14 PM Jun 19, 2024 | Team Udayavani |

ತಿರುವನಂತಪುರ: ಕಣ್ಣೂರಿನಲ್ಲಿ ಪದೇ ಪದೆ ಬಾಂಬ್‌ ಸ್ಫೋಟದ ಘಟನೆಗಳು ನಡೆಯುತ್ತಿರುವ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಅವರು ಸ್ಫೋಟ ಪ್ರಕರಣಗಳಿಗೆ ವಿಪಕ್ಷಗಳು ಅನಗತ್ಯವಾಗಿ ರಾಜಕೀಯ ಬಣ್ಣ ನೀಡುತ್ತಿವೆ. ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು.

Advertisement

ಕಣ್ಣೂರಿನಲ್ಲಿ ಮಂಗಳವಾರ ಬಾಂಬ್‌ಸ್ಫೋಟಗೊಂಡಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ವಿಧಾನಸಭಾ ಕಲಾಪವನ್ನು ಮುಂದೂಡಿ ಸ್ಫೋಟ ಕುರಿತು ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಒತ್ತಾಯಿಸಿತ್ತು. ರಾಜ್ಯದಲ್ಲಿ ಸ್ಫೋಟಕಗಳ ತಯಾರಿಕೆಯನ್ನು ಆಡಳಿತಾರೂಢ ಸಿಪಿಎಂ ಪೋಷಿಸುತ್ತಿದೆ ಎಂದೂ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next