Advertisement

ಕನ್ನಡ ಸೇವೆ : ಈ ಮಠದ ಬಗ್ಗೆಯೂ ಸ್ವಲ್ಪ ತಿಳಿದುಕೊಳ್ಳೋಣ

10:23 PM Oct 31, 2022 | Team Udayavani |

ಕುಳಗೇರಿ ಕ್ರಾಸ್(ಬಾಗಲಕೋಟೆ): ರಾಜ್ಯೋತ್ಸವ ನವೆಂಬರ್ ೧ ರಂದು ಅಷ್ಟೇ ಏಕೆ…? ನೋಡಬನ್ನಿ ಇಲ್ಲಿ ವರ್ಷಪೂರ್ತಿ ನಡೆಯುತ್ತೆ ಕನ್ನಡ ರಾಜ್ಯೋತ್ಸವ ಈ ಮಠದಲ್ಲಿ… ಹೌದು ಮಠ-ಮಂದಿರಗಳು ಧಾರ್ಮಿಕ ಕಾರ್ಯಕ್ರಮಕ್ಕೆ ಮಾತ್ರ ಮಿಸಲು ಎಂದು ತಿಳಿದಿರುವ ನಾವು ಈ ಮಠದ ಬಗ್ಗೆಯೂ ಸ್ವಲ್ಪ ತಿಳಿದುಕೊಳ್ಳೋಣ.

Advertisement

ಮಠಗಳೆಂದರೆ ಪುರಾಣ-ಪ್ರವಚನ ಧಾರ್ಮಿಕ ಕಾರ್ಯಕ್ರಮ, ದಾಸೋಹ, ಪೂಜೆ-ಪುನಸ್ಕಾರ ಹಿಗೆ ಹತ್ತು ಹಲವು ಕಾರ್ಯಕ್ರಮಗಳು ಮಠ-ಮಂದಿರಗಳಲ್ಲಿ ನಡೆಯೋದು ಸಾಮಾನ್ಯ. ಆದರೆ ಈ ಮಠದ ಸ್ವಾಮಿಜಿ ಧಾರ್ಮಿಕ ಕಾರ್ಯಕ್ರಮ ನಡೆಸುವುದರ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಎಂದು ಭಾಷೆ-ನೆಲ-ಜಲ ಹಿಗೆ ಸದ್ದಿಲ್ಲದೇ ನಮ್ಮ ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವವರೇ ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಸ್ವಾಮಿಜಿ.

ಸ್ವತಃ ಸಾಹಿತಿಗಳಾದ ಪೂಜ್ಯರು ದೊರೆಸ್ವಾಮಿ ಸಾಹಿತ್ಯ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಸುಮಾರು ೨೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ ಪುಸ್ತಕ ಪ್ರೀಯರು. ಅಲ್ಲದೇ ಶ್ರೀಮಠದಲ್ಲಿ ಸಿಂದಗಿ ಶ್ರೀಶಾಂತವಿರೇಶ್ವರ ಗ್ರಂಥಾಲಯವನ್ನು ಸ್ಥಾಪಿಸಿ ಅದರಲ್ಲಿ ಆದ್ಯಾತ್ಮಿಕ, ಸಾಹಿತ್ಯಿಕ ಇನ್ನಿತರೆ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ಗ್ರಾಮೀಣ ಭಾಗದ ಜನರಿಗೆ ಓದುವ ಹವ್ಯಾಸವನ್ನು ಬೆಳೆಸುತ್ತಿರುವ ಪುಸ್ತಕ ಸೇವೆ ಅನನ್ಯವಾದದ್ದು.

ಕನ್ನಡಕ್ಕೆ ಶಾಸ್ರ್ತೀಯ ಸ್ಥಾನ-ಮಾನ ಸಿಗಬೇಕೆಂದು ಒತ್ತಾಯಿಸಿ ಲಿಂ.ಡಾ.ಸಿದ್ದಲಿಂಗ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಪಾದಯಾತ್ರೆ ಮಾಡಿದವರು. ಪ್ರತಿವರ್ಷ ಕನ್ನಡ ರಥವನ್ನು ನಿರ್ಮಿಸಿ ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ ಹಿಗೆ ವಿವಿಧ ಜಿಲ್ಲೆಯ ಹಳ್ಳಿಗಳಲ್ಲಿ ಕನ್ನಡ ಉಪನ್ಯಾಸ ಮಾಲೆಗಳನ್ನು ಏರ್ಪಡಿಸಿ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ.

ಅಷ್ಟೇ ಅಲ್ಲ ರಾಷ್ಟ್ರೀಯತೆಯೂ ಇವರ ಮೈಯಲ್ಲಿ ಹರಿಯುತ್ತೆ. ಅಖಂಡ ೭೫ನೇ ಅಮೃತ ಮಹೋತ್ಸವದ ಅಂಗವಾಗಿ ಉಪನ್ಯಾಸಕರಿಂದ ೭೫ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಉಪನ್ಯಾಸ ಕಾರ್ಯಕ್ರಮ ನೀಡಿ ಆ ಮೂಲಕ ಜನರಿಗೆ ಹೋರಾಟಗಾರರ ಚರಿತ್ರೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಅಮೃತ ಮಹೋತ್ಸವದ ಅಂಗವಾಗಿ ೭೫ ಯೋಧಯನ್ನ ಸನ್ಮಾನಿಸಿ ಗೌರವಿಸಿದ್ದಾರೆ ಇಂಥ ಒಬ್ಬ ಕನ್ನಡ ಕಟ್ಟಾಳು ಈ ಮಠದ ಸ್ವಾಮಿಜಿ.

Advertisement

ಉದ್ಘಾಟನಾ ಸಮಾರಂಭ
ನವೆಂಬರ್ ೧ರಂದು ನಡೆಯಲಿರುವ ಕಾರ್ಯಕ್ರಮದ ಸಾನಿಧ್ಯವನ್ನ ಶ್ರೀಮಠದ ಶಾಂತಲಿಂಗ ಸ್ವಮಿಜಿ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ ಉಧ್ಘಾಟಿಸಲಿದ್ದು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ ಆರ್ ಯಾವಗಲ್. ಲಕ್ಷ್ಮವ್ವ ಕಟ್ಟಿಮನಿ, ನಾಗಪ್ಪ ಬೆನ್ನೂರ, ಶೃತಿ ಸಂಗಳದ, ಮಂಗಳಾ ಪಾಟೀಲ, ಬಿ ಸಿ ಹನಮಂತಗೌಡ್ರ, ಸಂಗಯ್ಯ ಹಿರೇಮಠ, ಶ್ರೀಮತಿ ಸಲ್ಮಾ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಯವರು ಭಾಗವಹಿಸುವರು.

ಪಂಪ ಯುಗದ ಕನ್ನಡ, ವಚನಕಾರರ ಕನ್ನಡ, ಹರಿಹರ-ರಾಘವಾಂಕ ಕನ್ನಡ, ಕುಮಾರವ್ಯಾಸ-ಚಾಮರಸ ಕನ್ನಡ, ಬೇಂದ್ರೆ-ಕುವೆಂಪು ಕನ್ನಡ ಹಿಗೆ ೭೫ಕ್ಕೂ ಹೆಚ್ಚು ಸಾಹಿತಿಗಳ ಕುರಿತು ವಿವಿಧ ಗ್ರಾಮಗಳಲ್ಲಿ ಉಪನ್ಯಾಸ ಮಾಲೆಗಳನ್ನ ನಡೆಸಿ ಕನ್ನಡ ಭಾಷೆ ನೆಲ-ಜಲದ ಕುರಿತು ಜಾಗೃತಿ ಮೂಡಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next