Advertisement

ಹಿಟ್‌ ಲಿಸ್ಟ್‌ ಗೆ ‘ರಾಣ’ ಗಾನ

04:25 PM Oct 02, 2022 | Team Udayavani |

ಮೂರು ವರ್ಷಗಳ ಹಿಂದೆ ಕನ್ನಡ ಸಿನಿರಂಗಕ್ಕೆ “ಪಡ್ಡೆಹುಲಿ’ಯಾಗಿ ತೆರೆಮೇಲೆ ಬಂದ ಯುವ ನಟ ಶ್ರೇಯಸ್‌ ಮಂಜು. ಚಿತ್ರರಗಂದ ಹೆಸರಾಂತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ ಮೂರು ವರ್ಷಗಳ ನಂತರ ಮತ್ತೆ ತೆರೆ ಮೇಲೆ ಘರ್ಜಿಸಲು ಬರುತ್ತಿದ್ದಾರೆ.

Advertisement

ಸ್ಟಾರ್‌ ನಿರ್ದೇಶಕ ನಂದ ಕಿಶೋರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ “ರಾಣ’ ಚಿತ್ರದ ಮೂಲಕ ಅದ್ಧೂರಿಯಾಗಿ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ನವೆಂಬರ್‌ 11 ರಂದು ತೆರೆಕಾಣುತ್ತಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಿಟ್‌ಲಿಸ್ಟ್‌ ಸೇರುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗುವಿಗೆ ಕಾರಣವಾಗಿದೆ.

ಮೂರು ವರ್ಷಗಳ ನಂತರ ಮತ್ತೆ ತೆರೆಗೆ ಬರುತ್ತಿರುವ ಶ್ರೇಯಸ್‌ ಚಿತ್ರಕ್ಕಾಗಿ ತಮ್ಮ ನೂರರಷ್ಟು ಶ್ರಮ ಹಾಕಿದ್ದಾರೆ. ಯಾವುದೇ ಶಾಟ್ಸ್‌ ಗಳನ್ನು ಮಾಡುವ ಮುನ್ನ, ತಮ್ಮ ಆಪ್ತವಲಯದಲ್ಲಿ ಸಲಹೆ ಕೂಡಾ ಪಡೆದು ಶ್ರೇಯಸ್‌ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾ ಬಿಟ್ಟು ನನಗೆ ಬೇರೆ ಯಾವುದರ ಬಗ್ಗೆ ಯೋಚನೆ ಇಲ್ಲ ಎನ್ನುತ್ತಾರೆ.

ಇದನ್ನೂ ಓದಿ:ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿ : ಬಾಲಕಿಯ ಅಣ್ಣನಿಂದಲೇ ಯುವಕನ ಬರ್ಬರ ಕೊಲೆ

ಚಿತ್ರದ ಹಾಡಿಗಾಗಿ ಸತತ 15 ದಿನಗಳ ಕಾಲ ಅಭ್ಯಾಸ ಮಾಡಿರುವ ಶ್ರೇಯಸ್‌, ಡಾನ್ಸ್‌ಗೂ ಮಹತ್ವನ್ನು ನೀಡಿದ್ದಾರೆ. ದಿನವೂ ಕಲಿಕೆಯಲ್ಲಿ ತೊಡಗಿರುವ ಶ್ರೇಯಸ್‌ ಚಿತ್ರಕ್ಕಾಗಿ ರಿಸ್ಕಿ ಸ್ಟಂಟ್‌ಗಳನ್ನು ಮಾಡಿದ್ದಾರೆ. ಈ ವೇಳೆ ಗಾಯಗಳಾಗಿದ್ದರೂ, ಫಿಜಿಯೋ ಪಡೆದು ಶೂಟ್‌ ಮಾಡಿದ್ದಾರೆ. ಸೆಟ್‌ನಲ್ಲಿ ಕೆಲ ಫೈಟಿಂಗ್‌ ಸೀನ್‌ಗಳನ್ನು ಮಾಡುವಾಗ ನೋವಾದಾಗ, ಅಲ್ಲೇ ಫಿಜಿಯೋ ಮಾಡಿಸಿ ಫೈಟ್‌ ಸೀನ್‌ ಮಾಡಿದ್ದೂ ಉಂಟು ಎಂಬುದು ಶ್ರೇಯಸ್‌ ಮಾತು.

Advertisement
Advertisement

Udayavani is now on Telegram. Click here to join our channel and stay updated with the latest news.

Next