– ಸಿಕ್ ಸಿಕೊªàರನ್ನೆಲ್ಲಾ ಮನಸ್ಸಲ್ಲಿ ಇಟ್ಕೊಂಡು ಹೃದಯ ಹಾಳ್ ಮಾಡ್ಕೊàಬೇಡಿ
-ಕಣ್ಸನ್ನೆಯಿಂದ ಕಣ್ಣೀರವರೆಗಿನ ಕಥೆ
ಹೀಗೆ ಚಿತ್ರದ ಹೆಸರಿನ ಸುತ್ತಮುತ್ತ ಎಲ್ಲೆಲ್ಲಿ ಜಾಗ ಸಿಗುತ್ತೋ ಅಲ್ಲೆಲ್ಲಾ ಒಂದೊಂದು ಸಾಲು ಸೇರಿಸಿದ್ದರು ನಿರ್ದೇಶಕ ಕೇಶವ್ ಚಂದು. ಅಷ್ಟೆಲ್ಲಾ ಸಾಲುಗಳ ಪೈಕಿ, “ಪಕ್ಕದಲ್ಲಿ ಮಲ್ಕೊಂಡ್ರೆ ಮಾತ್ರ ಹಾದರ ಅಲ್ಲ; ಮನಸ್ಸಲಿ ಇಟ್ಕೊಂಡ್ರೂ ಹಾದರಾನೇ …’ ಎಂಬ ಸಾಲು ಎಲ್ಲರನ್ನೂ ಕಾಡುತ್ತಲೇ ಇತ್ತು. ನಿರೂಪಕ ಯತಿರಾಜ್ಗೆ ಸ್ವಲ್ಪ ಜಾಸ್ತಿಯೇ ಕಾಡುತಿತ್ತು ಎಂದರೆ ತಪ್ಪಿಲ್ಲ. ಅದೇ ಕಾರಣಕ್ಕೆ ಅವರು ನಿರ್ದೇಶಕರನ್ನು ಅದರರ್ಥ ಏನು ಎಂದು ಕೇಳುತ್ತಿದ್ದರು. ಆದರೆ, ನಿರ್ದೇಶಕರು ಮಾತ್ರ ಉತ್ತರಿಸುವ ಮೂಡ್ನಲ್ಲಿರಲಿಲ್ಲ. ಅವರಿಗೆ ಚಿತ್ರದ ಟ್ರೇಲರ್ ಮತ್ತು ಮೇಕಿಂಗ್ ವೀಡಿಯೋ ಮಾತ್ರ ಬಿಡುಗಡೆ ಮಾಡುವ ಮತ್ತು ಪ್ರದರ್ಶಿಸುವ ಆಸಕ್ತಿ ಇತ್ತು. ಹಾಗಾಗಿ ಅವರು ಆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರೇ ಹೊರತು, ನಿರೂಪಕರ ಪ್ರಶ್ನೆಗೆ ಉತ್ತರಿಸುವ ಮೂಡ್ನಲ್ಲಿರಲಿಲ್ಲ.
Advertisement
ಹಾಗಂತ ಯತಿರಾಜ್ ಸಹ ಬಿಡುವ ಮೂಡ್ನಲ್ಲಿರಲಿಲ್ಲ. ನಿಲ್ಲಿಸಿಕೊಂಡು ಕೇಳಿಯೇ ಬಿಟ್ಟರು, ಏನದು ಅಂತ. ಕೊನೆಗೆ ಉತ್ತರಿಸಿದ ನಿರ್ದೇಶಕರು, “ಇದೊಂದು ಪ್ರೀತಿಯ ಕುರಿತಾದ ಸಿನಿಮಾ. ಇವತ್ತು ಜನ ಹೇಗಾಗಿದ್ದಾರೆ ಅಂದರೆ, ಸಂದೇಶ ಎಲ್ಲಾ ಕೇಳುವ ಸ್ಥಿತಿಯಲ್ಲಿಲ್ಲ. ಆದರೆ, ಅವರು ಯೋಚನೆ ಮಾಡುವಂತೆ ಮಾಡಬೇಕು. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಅವರ ತಲೆಗೆ ಹುಳ ಬಿಡಬೇಕಿತ್ತು. ಆ ಕಾರಣ ಇಂತಹ ಸಂಭಾಷಣೆಗಳು ಮತ್ತು ಸಾಲುಗಳನ್ನು ಸೇರಿಸಿದ್ದೇವೆ. ಚಿತ್ರ ನೋಡಿದ ನಂತರ ಒಂದಿಷ್ಟು ವಿಷಯಗಳು ಕಾಡಬೇಕು ಎನ್ನುವ ಕಾರಣಕ್ಕೆ ಈ ಪ್ರಯತ್ನ’ ಎಂದರು.