Advertisement

‘ಎವಿಡೆನ್ಸ್‌’ನಲ್ಲಿ ತ್ರಿಕೋನ ಪ್ರೇಮ

03:15 PM Jul 30, 2022 | Team Udayavani |

ತ್ರಿಕೋನ ಪ್ರೇಮಕಥಾಹಂದರದ ಕ್ರೈಂ-ಥ್ರಿಲ್ಲರ್‌ ಚಿತ್ರ “ಎವಿಡೆನ್ಸ್‌’ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ “ಎವಿಡೆನ್ಸ್‌’ ಸಿನಿಮಾದ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ಸೆಪ್ಟೆಂಬರ್‌ ಅಂತ್ಯಕ್ಕೆ ಸಿನಿಮಾವನ್ನು ಪ್ರೇಕ್ಷಕರ ಮುಂದೆತರುವ ಯೋಚನೆಯಲ್ಲಿದೆ ಚಿತ್ರತಂಡ.

Advertisement

“ಶ್ರೀ ಧೃತಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಶ್ರೀನಿವಾಸ್‌ ಪ್ರಭು ಕೆ, ಮಾದೇಶ್‌, ನಟರಾಜ್‌ ಸಿ. ಎಸ್‌ ನಿರ್ಮಿಸುತ್ತಿರುವ”ಎವಿಡೆನ್ಸ್‌’ ಸಿನಿಮಾಕ್ಕೆ ಪ್ರವೀಣ್‌ ರಾಮಕೃಷ್ಣ ಕಥೆ, ಚಿತ್ರಕಥೆ ಬರೆದು ಆಕ್ಷನ್‌-ಕಟ್‌ ಹೇಳಿದ್ದಾರೆ. ಚಿತ್ರಕ್ಕೆ ಅರವಿಂದ್‌ ಅಚ್ಚು, ಎಂ. ಎನ್‌ ರವೀಂದ್ರ ರಾವ್‌, ಪ್ರಶಾಂತ್‌ ಸಿ. ಪಿ, ರಮೇಶ್‌ ಕೆ, ಕಿಶೋರ್‌ ಬಾಬು ಮತ್ತು ನರಸಿಂಹ ಮೂರ್ತಿ ಸಹ ನಿರ್ಮಾಣವಿದೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರವೀಣ್‌ ರಾಮಕೃಷ್ಣ, “ಇದೊಂದು ಟ್ರಯಾಂಗಲ್‌ ಲವ್‌ಸ್ಟೋರಿ ಜೊತೆಗೆ ಕ್ರೈಂ-ಥ್ರಿಲ್ಲರ್‌ ಕಥಾಹಂದರ ಸಿನಿಮಾ. ಒಂದು ಕ್ರೈಂನಲ್ಲಿ ತನಿಖೆ ಹೇಗೆ ನಡೆಯುತ್ತದೆ. ಅದರ ಹಿಂದಿನ ನಿಗೂಢ ವಿಷಯಗಳು ಹೇಗೆ ಒಂದೊಂದಾಗಿ ತೆರೆದುಕೊಳ್ಳುತ್ತದೆ ಅನ್ನೋದು ಸಿನಿಮಾ. ಶೀಘ್ರದಲ್ಲಿಯೇ ಹಾಡುಗಳು ಮತ್ತು ಟ್ರೇಲರ್‌ ಬಿಡುಗಡೆ ಮಾಡಲಿದ್ದೇವೆ’ ಎಂದಿದ್ದಾರೆ.

ರೋಬೊ ಗಣೇಶನ್‌, ಮಾನಸ ಜೋಶಿ, ಆಕರ್ಷ್‌ ಆದಿತ್ಯ, ರಚಿತಾ, ಚಮಕ್‌ ಚಂದ್ರ, ಪವನ್‌ ಸುರೇಶ್‌, ಶಶಿಧರ್‌ ಕೋಟೆ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಚಿತ್ರದ 4 ಹಾಡುಗಳಿಗೆ ಆರೋನ್‌ ಕಾರ್ತಿಕ ವೆಂಕಟೇಶ್‌ ಸಂಗೀತವಿದ್ದು, ಡಾ. ನಾಗೇಂದ್ರ ಪ್ರಸಾದ್‌, ಪ್ರವೀಣ್‌ ರಾಮಕೃಷ್ಣ ಸಾಹಿತ್ಯವಿದೆ. ನಂದ ಮತ್ತು ರಘು ಆರ್‌.ಜೆ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಹನುಮಯ್ಯ ಬಂಡಾರು, ಚಂದ್ರಶೇಖರ್‌ ಪ್ರಸಾದ್‌ ಸಂಭಾಷಣೆಯಿದೆ. ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ, ಶೇಷಾಚಲ ಕುಲಕರ್ಣಿ ಸಂಕಲನವಿದೆ.

ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು, ನೆಲಮಂಗಲ ಸುತ್ತಮುತ್ತ “ಎವಿಡೆನ್ಸ್‌’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next