Advertisement

Award; ಅನುವಾದಿತ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ

12:58 AM Mar 12, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ಅನುವಾದಿತ ಕೃತಿಗಳಿಗೆ ನೀಡುವ ಪ್ರಶಸ್ತಿಯನ್ನು ಸೋಮವಾರ ಘೋಷಣೆ ಮಾಡಿದೆ. ಲೇಖಕ ಕೆ.ಕೆ.ಗಂಗಾಧರನ್‌ ಅವರ ಮಲಯಾಳಂ ಕಥೆಗಳು ಕನ್ನಡ ವಿಭಾಗದಿಂದ ಪ್ರಶಸ್ತಿ ಪಡೆದುಕೊಂಡಿದೆ.

Advertisement

ಅಲ್ಲದೇ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರ “ಮಕ್ಕಳಿಗೆ ನನ್ನ ನೆಚ್ಚಿನ ಕಥೆಗಳು’ ಕೃತಿಯನ್ನು ಸಂಸ್ಕೃತಕ್ಕೆ ನಾಗರತ್ನ ಹೆಗಡೆ ಅವರು ಅನುವಾದಿಸಿದ್ದು (ರುಚಿರಃ ಬಾಲಕಥಾಃ) ಇದು ಪ್ರಶಸ್ತಿಗೆ ಆಯ್ಕೆಯಾಗಿದೆ. ಕೋಟ ಶಿವರಾಮ ಕಾರಂತ ಅವರ ಚೋಮನದುಡಿ ಕಾದಂಬರಿಯನ್ನು ಗುಲ್‌ಜರ್‌ ಅಹ್ಮದ್‌ ರಥರ್‌ ಅವರು “ಸೋಮ ಸುಲ್‌ದೊಲ್‌’ ಹೆಸರಿನಲ್ಲಿ ಕಾಶ್ಮೀರಿ ಭಾಷೆಗೆ ಅನುವಾದಿಸಿದ್ದು, ಇದು ಪ್ರಶಸ್ತಿಗೆ ಆಯ್ಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next