Advertisement

ಜೋಗದ ಸಿರಿ ಕಣ್ತುಂಬಿಕೊಂಡು ಸಂಭ್ರಮಿಸಿದ ನಟ ಜಗ್ಗೇಶ್

07:25 PM Aug 05, 2021 | Team Udayavani |

ಬೆಂಗಳೂರು : ನವರಸ ನಾಯಕ ಜಗ್ಗೇಶ್ ಅವರು ತಮ್ಮ ಸಿನಿಮಾಗಳ ಶೂಟಿಂಗ್ ಬ್ಯುಝಿ ಶೆಡ್ಯೂಲ್ಡ್ ನಡುವೆಯೂ ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ.

Advertisement

ಬುಧವಾರ ಜೋಗಕ್ಕೆ ತೆರಳಿದ್ದ ಜಗ್ಗಣ್ಣ, ಅಲ್ಲಿಯ ಜಲಧಾರೆಯನ್ನು ಕಣ್ತುಂಬಿಕೊಂಡಿದ್ದಾರೆ. ಜೋಗದ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವಿಟರಿನಲ್ಲಿ ಬರೆದುಕೊಂಡಿದ್ದಾರೆ.

“ ಪ್ರಕೃತಿಯಲ್ಲಿ ನನ್ನ ಪ್ರತಿರೂಪ ಪ್ರತಿಬಿಂಬವಿದೆ ಎಂದು ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವ ಮಾತನ್ನು ಉಲ್ಲೇಖಿಸಿರುವ ಅವರು,  ಪ್ರಕೃತಿಯ ಕಂಡಾಗ ಮನ ಆನಂದ ಮೂಡುವ ಮತ್ತೊಂದು  ಸ್ಥಿತಿಯೇ ಭಕ್ತಿ. ಇದೇ ಮಾತನ್ನು ಮನಶಾಸ್ತ್ರಜ್ಞ ಹೇಳುತ್ತಾರೆ. ಮನಸ್ಸಿಗೆ ಶಾಂತಿ ಸಿಗಲು ಪ್ರಕೃತಿಯಲ್ಲಿ ವರ್ಷಕ್ಕೆ ಕೆಲ ದಿನ ಮನ ಮಜ್ಜನ ಮಾಡಿ ಬನ್ನಿ ಮನಸ್ಸಿನ ಆರೋಗ್ಯಕ್ಕೆ ಇದು ಶ್ರೇಷ್ಟ ಚಿಕಿತ್ಸೆ ಎನ್ನುವುದು ಮನಶಾಸ್ತ್ರಜ್ಞರ ಸಲಹೆ ಆಗಿರುತ್ತದೆ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.

ಇನ್ನು ಜಗ್ಗೇಶ್ ಅವರು ನಟಿಸಿರುವ ತೋತಾಪುರಿ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ವರ್ಷ ಈ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ. ಇದರ ಜೊತೆ ಮಠ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಅವರ ಜೊತೆ ರಂಗನಾಯಕ ಸಿನಿಮಾದಲ್ಲೂ ಜಗ್ಗೇಶ್ ಅವರು ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಕೂಡ ಶುರುವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next