Advertisement
ಹಿರಿಯ ಸಾಹಿತಿ ಡಾ.ಪಾಟೀಲ ಪುಟ್ಟಪ್ಪ ಹಾಗೂ ಸಮಾಜ ಸೇವಕ ಭೀಮಪ್ಪ ಗುಂಡಪ್ಪ ಗಡಾದ ಅವರು 2014ರಲ್ಲಿ ಸರ್ಕಾರಕ್ಕೆ ಪತ್ರ ಬರೆದು, ಕನ್ನಡ ನಾಡಿಗೆ ಪ್ರತ್ಯೇಕ ಧ್ವಜದ ವಿನ್ಯಾಸ ಸಿದ್ದಪಡಿಸಿ, ಅದಕ್ಕೆ ಕಾನೂನಿನ ಸ್ವರೂಪ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಂಡು 2017 ಜೂನ್ 6ರಂದು ಆದೇಶ ಹೊರಡಿಸಿತ್ತು. ಕನ್ನಡ ನಾಡಿಗೆ ಪ್ರತ್ಯೇಕ ಧ್ವಜ ವಿನ್ಯಾಸ ಸಿದ್ದಪಡಿಸಿ ಕಾನೂನಿನ ಸ್ವರೂಪ ನೀಡುವ ಕುರಿತು ವರದಿ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಿ ಆದೇಶಿಸಿತ್ತು.
Related Articles
Advertisement
ಸಮಿತಿ ಕುರಿತು ಮಾಹಿತಿ ನೀಡುವ ಜವಾಬ್ದಾರಿಯನ್ನು ಸರ್ಕಾರ ಸರಿಯಾಗಿ ನಿರ್ವಹಿಸಬೇಕಿತ್ತು. ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಧ್ಯಕ್ಷರಾಗಿದ್ದು, ಈ ವಿಚಾರ ಅವರ ಗಮನಕ್ಕೆ ಬಂದಿರುತ್ತದೆ. ಅವರಾದರೂ ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಆಹ್ವಾನಿಸಬೇಕಿತ್ತು. ಕೇವಲ ನಾಮಕಾವಸ್ಥೆಗೆ ಸಮಿತಿ ರಚಿಸಿ, ವಿವಾದ ಎಬ್ಬಿಸುವ ಅಗತ್ಯವಿರಲಿಲ್ಲ ಎಂಬ ಆರೋಪ ಕನ್ನಡ ಪರ ಸಂಘಟನೆಗಳಿಂದ ಕೇಳಿಬಂದಿದೆ.
ಸರ್ಕಾರದ ಆದೇಶ ಯಾವಾಗ ಬಂದಿತ್ತೋ ಗೊತ್ತಿಲ್ಲ. ಆದರೆ ನನಗೆ ಮಾಹಿತಿ ಕಳೆದ ಎರಡೂ¾ರು ದಿನಗಳ ಹಿಂದೆಯಷ್ಟೇ ಬಂದಿದೆ. ಇನ್ನೂ ಸಮಿತಿ ಸಭೆ ಸೇರಿಲ್ಲ. ಮೊದಲ ಸಭೆ ನಡೆದ ನಂತರ ಏನು ಮಾಡಬೇಕು ಎಂಬಿತ್ಯಾದಿ ವಿಚಾರಗಳು ಗೊತ್ತಾಗಲಿವೆ. ಇಷ್ಟೇ ದಿನದಲ್ಲಿ ವರದಿ ನೀಡಬೇಕು ಎಂಬ ಯಾವುದೇ ಗಡುವನ್ನು ಸರ್ಕಾರ ನೀಡಿಲ್ಲ.– ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ. ಇದುವರೆಗೂ ಆದೇಶ ಪ್ರತಿ ನನ್ನ ಕೈಸೇರಿಲ್ಲ. ನಾನು ಕೂಡ ಆ ಸಮಿತಿಯಲ್ಲಿ ಸದಸ್ಯನಿದ್ದೇನೆ ಅನ್ನೋದು ಸಹ ಮಾಧ್ಯಮಗಳ ಮೂಲಕ ಗೊತ್ತಾಯೆ¤à ಹೊರತು, ಅಧಿಕೃತವಾಗಿ ಯಾವುದೇ ಆದೇಶ ಸಿಕ್ಕಿಲ್ಲ.
– ಡಾ.ಮನುಬಳಿಗಾರ್, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು. ಸಮಿತಿ ರಚನೆ ಕುರಿತು ಆದೇಶ ಬಂದ ಕೂಡಲೇ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಹಾಗೂ ಇತರರಿಗೆ ಟಪಾಲನ್ನು ಅಧಿಕೃತವಾಗಿಯೇ ತಲುಪಿಸಿದ್ದೇವೆ. ಆಗಾಗ ಇಲಾಖೆಯಲ್ಲಿ ಅಧಿಕಾರಿಗಳು ಬದಲಾಗುವ ಪ್ರಕ್ರಿಯೆ ಸಾಮಾನ್ಯವಾಗಿದ್ದು, ಈ ಕಾರಣದಿಂದ ಈಗಿರುವವರಿಗೆ ಮಾಹಿತಿ ಸಿಕ್ಕದಿರಬಹುದು. ಮೊದಲ ಸಭೆ ಯಾವಾಗ ಎಂದು ನಿರ್ಧಾರವಾದಾಗ ವಿಷಯ ತನ್ನಿಂತಾನೆ ಗೊತ್ತಾಗುತ್ತಿತ್ತು.
– ರಘುಸ್ವಾಮಿ, ಉಪಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. – ಸಂಪತ್ ತರೀಕೆರೆ