Advertisement

Sandalwood: ಸಸ್ಪೆನ್ಸ್‌ ಥ್ರಿಲ್ಲರ್‌ ಕಣ್ಣಾಮುಚ್ಚೆ…

02:58 PM Feb 21, 2024 | Team Udayavani |

“ಕಣ್ಣಾಮುಚ್ಚೆ ಕಾಡೇಗೂಡೆ’ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದೆ ಚಿತ್ರತಂಡ. “ಡಾರ್ಲಿಂಗ್‌ ಪ್ರೊಡಕ್ಷನ್ಸ್‌ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದ್ದು, ಅನಿತಾ ವೀರೇಶ್‌ ಕುಮಾರ್‌ ಮತ್ತು ಮೀನಾಕ್ಷಿ ರಾಜಶೇಖರ್‌ ಅವರು ಬಂಡವಾಳ ಹೂಡಿದ್ದಾರೆ.

Advertisement

ನಟರಾಜ್‌ ಕೃಷ್ಣೇಗೌಡ ರವರು ನಿರ್ದೇಶಕರಾಗಿದ್ದಾರೆ. ಚಿತ್ರಕ್ಕೆ ದೀಪಕ್‌ ಕುಮಾರ್‌ ಜೆ ಕೆ ಅವರ ಛಾಯಾಗ್ರಹಣ, ಧನುಷ್‌ ಎಲ್‌ ಬೇದ್ರೆ ಸಂಕಲನ ಹಾಗೂ ಸಂತೋಷ್‌ ಜೋಶ್ವ ಮತ್ತು ವಿಜಿತ್‌ ಕೃಷ್ಣ ಅವರ ಸಂಗೀತವಿದೆ. ಚಿತ್ರದಲ್ಲಿ ದೀಪಕ್‌ ರೈ ಪಾಣಾಜೆ, ಚಂದ್ರಕಲಾ ರಾವ್‌ ಉಡುಪಿ, ಜ್ಯೋತಿಶ್‌ ಶೆಟ್ಟಿ, ಪುಷ್ಪರಾಜ್‌ ಬೋಳೂರ್‌ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಮ್ಯಾನ್‌ ಆಫ್ ದಿ ಮ್ಯಾಚ್‌ ಚಿತ್ರದಲ್ಲಿ ಮುಖ್ಯಭೂಮಿಕೆಲ್ಲಿದ್ದ ಅಥರ್ವ ಪ್ರಕಾಶ ನಾಯಕ ನಟರಾಗಿದ್ದಾರೆ. ಪ್ರಾರ್ಥನಾ ಚಿತ್ರದ ನಾಯಕಿ. ರಾಘವೇಂದ್ರ ರಾಜ್‌ಕುಮಾರ್‌ ಈ ಸಿನಿಮಾದಲ್ಲಿ ಬಹುಮುಖ್ಯ ಪಾತ್ರ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next