Advertisement

ಕಾಣಿಯೂರು-ಕಾಞಂಗಾಡ್‌ ರೈಲ್ವೇ ಮಾರ್ಗಕ್ಕೆ ಶಾಶ್ವತ ಹಿನ್ನಡೆ

12:09 AM Sep 19, 2022 | Team Udayavani |

ಸುಳ್ಯ: ಕಾಞಂಗಾಡ್‌ – ಕಾಣಿಯೂರು ರೈಲ್ವೇ ಮಾರ್ಗ ಪ್ರಸ್ತಾವವನ್ನು ಈ ಹಿಂದೆ ರೈಲ್ವೇ ಇಲಾಖೆಯೂ ತಿರಸ್ಕರಿಸಿದ್ದು, ಎರಡೂ ರಾಜ್ಯಗಳು ಒಪ್ಪಿಗೆ ನೀಡಿದರೆ ಪರಿಶೀಲನೆ ನಡೆಸಬಹುದು ಎಂದಿತ್ತು. ಈಗ ರಾಜ್ಯ ಸರಕಾರ ಇದನ್ನು ತಿರಸ್ಕರಿಸಿದೆ.

Advertisement

ಕೇರಳ ಮತ್ತು ಕರ್ನಾಟಕ ಹಾಗೂ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುವ ದೃಷ್ಟಿಯಿಂದ ಅನೇಕ ವರ್ಷಗಳ ಹಿಂದೆಯೇ ಈ ಪ್ರಸ್ತಾವ ಚಾಲನೆಗೆ ಬಂದಿತ್ತು.

ಸರ್ವೇ ನಡೆಸಲು ಬಜೆಟ್‌ನಲ್ಲಿ ಹಣವನ್ನೂ ಮೀಸಲಿರಿಸಲಾಗಿತ್ತು. ರೈಲ್ವೇ ಮಾರ್ಗದ ಅನುಷ್ಠಾನಕ್ಕೆ ಕೇರಳ ಸರಕಾರ ಹೆಚ್ಚಿನ ಉತ್ಸುಕತೆ ತೋರಿತ್ತಲ್ಲದೆ ಕೇರಳದ ಪಾಣತ್ತೂರಿನವರೆಗೆ ಸರ್ವೇ ಪೂರ್ತಿಗೊಳಿಸಿತ್ತು.
ಈ ಯೋಜನೆ ನನೆಗುದಿಗೆ ಬೀಳುವ ಹಂತದಲ್ಲಿದ್ದಾಗ ಸುಳ್ಯ ಭಾಗದ ಕೆಲವು ಮುಖಂಡರು ಕ್ರಿಯಾಸಮಿತಿ ರಚಿಸಿ ಕಾಞಂಗಾಡ್‌ ಭಾಗದ ಜನಪ್ರತಿನಿಧಿಗಳೊಂದಿಗೆ ಕೇಂದ್ರ – ರಾಜ್ಯ ಸಚಿವರನ್ನು ಭೇಟಿ ಮಾಡಿದ್ದರು. ಆಗ ಭರವಸೆಗಳು ದೊರೆತಿದ್ದವು. ಆದರೆ ರಾಜ್ಯ ಸರಕಾರ ತಿರಸ್ಕರಿಸುವುದರೊಂದಿಗೆ ಯೋಜನೆ ಶಾಶ್ವತವಾಗಿ ಬದಿಗೆ ಸರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next