Advertisement

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

12:25 AM Jan 27, 2022 | Team Udayavani |

ಉಡುಪಿ: ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವ ಪಥಸಂಚಲನದ ಸಾಂಸ್ಕೃತಿಕ ವಿಭಾಗ ದಲ್ಲಿ ಉಡುಪಿಯ ಎಂಜಿಎಂ ಮತ್ತು ಪಿಪಿಸಿಯ 14 ವಿದ್ಯಾರ್ಥಿಗಳ ಕಂಗೀಲು ನೃತ್ಯ ತಂಡ ಭಾಗವಹಿಸಿತು.

Advertisement

ಪಿಪಿಸಿಯ ನಿಧಿತಾ ಶೆಟ್ಟಿ, ಅನಿಶಾ ಶೆಟ್ಟಿ, ಶರೋನ್‌ ವಿವೇನ ಮಾಬೆನ್‌, ದೀಪಾಶ್ರೀ, ಚಿರಾಗ್‌ ಜಿ. ಕೋಟ್ಯಾನ್‌, ವರುಣ್‌ ಬಿ. ಕೋಟ್ಯಾನ್‌, ಶೀಜಲ್‌ ಪೂಜಾರಿ, ಭಾವನಾ ಪರಮೇಶ್ವರ ಗಾಂವ್ಕರ್‌, ಎಂಜಿಎಂನ ಅಂಕಿತ್‌ ಯು. ನಾಯಕ್‌, ಆಕಾಶ್‌ ಎಸ್‌. ಪ್ರಭು, ಭಾಗ್ಯಶ್ರೀ ಎಚ್‌., ಅಶ್ವಿ‌ನಿ ಜಿ. ಸುವರ್ಣ, ವ್ರಾಧಿಕಾ ಮಾಲಾರಾಣಿ ಎರ್ಮಾಳು, ಹರ್ಷಿತ್‌ ಕುಮಾರ್‌ ಅವರು ಪಾಲ್ಗೊಂಡ ವಿದ್ಯಾರ್ಥಿಗಳು.

ಇವರು ಸ್ವತಂತ್ರವಾಗಿ ಪ್ರಯತ್ನ ಪಟ್ಟು ರಾಜ್ಯ ಮತ್ತು ದೇಶ ಮಟ್ಟದ ಆಯ್ಕೆ ಸಮಿತಿಗಳಿಂದ ಆಯ್ಕೆಯಾ
ಗಿರುವುದು ವಿಶೇಷ. ಇದಕ್ಕೆ ಬೇಕಾದ ಖರ್ಚುವೆಚ್ಚಗಳನ್ನೂ ಅವರೇ ಸ್ವತಃ ಮತ್ತು ಇತರರ ಸಹಕಾರದಿಂದ ಭರಿಸಿದ್ದಾರೆ.

ಇದನ್ನೂ ಓದಿ:ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

ದಿಲ್ಲಿಯಲ್ಲಿ ಉಡುಪಿ ವಿದ್ಯಾರ್ಥಿಗಳು
ಹೊಸದಿಲ್ಲಿಯ ಪಥಸಂಚಲನದಲ್ಲಿ ಉಡುಪಿ ಎಂಜಿಎಂನ ಎನ್‌ಸಿಸಿ ನೌಕಾ ಪಡೆಯ ಜ್ಞಾನೇಶ್‌ ಅಮೀನ್‌ ಮತ್ತು ಎಂಜಿಎಂನ ನಿತೀಶ್‌ ಪ್ರಸಾದ್‌ ದೇವಾಡಿಗ ಪೂರ್ಣಪ್ರಜ್ಞ ಕಾಲೇಜಿನ ಎನ್‌ಸಿಸಿ ತಂಡವನ್ನು ಪ್ರತಿನಿಧಿಸಿದರು.

Advertisement

ಕರಾವಳಿ ಕಲಾವಿದರ ಪಾತ್ರ
ದಿಲ್ಲಿಯ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ರಾಜ್ಯದ “ಪಾರಂಪರಿಕ ಕರಕುಶಲತೆಗಳ ತೊಟ್ಟಿಲು’ ಸ್ತಬ್ಧಚಿತ್ರ ಕರಾವಳಿಯ ಕಲಾವಿದ ಶಶಿಧರ ಅಡಪ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಉಪ್ಪೂರಿನ ಕೃಷ್ಣ ಗುಡಿಗಾರ್‌
ಗೊಂಬೆಗಳನ್ನು ನಿರ್ಮಿಸಿದ್ದು, ಪುರು ಷೋತ್ತಮ ಅಡ್ವೆ ಸೇರಿದಂತೆ ರಾಜ್ಯದ ಇತರ ಕಲಾವಿದರ ಕೊಡುಗೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next